Difference between revisions 1027685 and 1037636 on knwiki

{{ಚುಟುಕು}}
[[Image:India Karnataka Raichur district.svg|thumb|ರಾಯಚೂರು, [[ಕರ್ನಾಟಕ]]]]

'''ರಾಯಚೂರು''' [[ಕರ್ನಾಟಕ]] ರಾಜ್ಯದ  ಉತ್ತರ ಭಾಗದಲ್ಲಿರುವ ಪ್ರಮುಖ [[ಜಿಲ್ಲೆ]]. ರಾಯಚೂರು ಜಿಲ್ಲೆಯ ಜನಸಂಖ್ಯೆ [[೨೦೧೧]] ರ ಜನಗಣತಿಯಂತೆ ೧೯,೨೮,೮೧೨. ರಾಯಚೂರು ಜಿಲ್ಲೆಯಲ್ಲಿ 8 ತಾಲೂಕುಗಳಿವೆ: ರಾಯಚೂರು, [[ದೇವದುರ್ಗ]], [[ಸಿಂಧನೂರು]], [[ಮಾನವಿ]] ಸಿರವಾರ, ಮಸ್ಕಿ.,  ,[[ಲಿಂಗಸೂಗೂರು]]. ಮತ್ತು ಅರಕೇರಾ ತಾಲೂಕು ಗಳು,  ಈ ಜಿಲ್ಲೆಯ [[ಜಿಲ್ಲಾಕೇಂದ್ರ]] ರಾಯಚೂರು ನಗರ. ಇದು [[ಬೆಂಗಳೂರು|ಬೆಂಗಳೂರಿನಿಂದ]] ೪೦೯ [[ಕಿಮೀ]] ದೂರದಲ್ಲಿದೆ. 

== ಇತಿಹಾಸ ==
ಭಾರತದ ಸ್ವಾತಂತ್ರ ಹೋರಾಟ ಮತ್ತು ನಂತರದ  ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಪ್ರಮುಖವಾದುದು.  ರಾಯಚೂರು ಕೋಟೆ ರಾಯಚೂರು ನಗರದ ಚಾರಿತ್ರಿಕ ಆಕರ್ಷಣೆಗಳಲ್ಲಿ ಒಂದು - ಇದನ್ನು ೧೨೯೪ ರಲ್ಲಿ ಕಟ್ಟಲಾಯಿತು. ರಾಯಚೂರಿನ ಇನ್ನೊಂದು ವಿಶೇಷತೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು ಬಹುಮನಿ ಸಾಮ್ರಾಜ್ಯಗಳ ಅರಸರ ಕಾಲದಲ್ಲಿ ಈ ಪ್ರದೇಶ ಹೋರಾಟದ ಅಂಗಳವೂ ಆಗಿತ್ತೆನ್ನಬಹುದು.

== ಭೌಗೋಳಿಕ ಲಕ್ಷಣಗಳು ==
ಜಿಲ್ಲೆಯ ದಕ್ಷಿಣದಲ್ಲಿ ತುಂಗಭದ್ರಾ ನದಿ ಹಾಗೂ ಉತ್ತರದಲ್ಲಿ ಕೃಷ್ಣಾ ನದಿಯು ಹರಿಯುತ್ತಿದ್ದು, ಬಹುತೇಕ ಬಯಲು ಪ್ರದೇಶವನ್ನು ಹೊಂದಿದೆ. ಲಿಂಗಸೂಗೂರು, ದೇವದುರ್ಗ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಚಿನ್ನದ ಅದಿರಿನ ನಿಕ್ಷೇಪಗಳಿವೆ.

== ಹವಾಗುಣ ==
ಜಿಲ್ಲೆಯ ಹವಾಗುಣವು ಬಹುತೇಕ  ಒಣ  ಹವೆ ಇರುತದೆ ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ೪೫ ಡಿಗ್ರಿವರೆಗೆ ಉಷ್ಣತೆ ಇರುತ್ತದೆ.

==ಜಿಲ್ಲೆಯ ಪ್ರಮುಖರು==  
*ಶ್ರೀ ಚನ್ನಬಸವಪ್ಪ ಬೆಟ್ಟದೂರು, ಹಿರಿಯ  ಸ್ವಾತಂತ್ರ ಹೋರಾಟಗಾರರು, ರೈತ ಹೋರಾಟಗಾರರು, ವಿಚಾರವಾದಿಗಳು
*ಶ್ರೀ ಶಂಕರಗೌಡ ಬೆಟ್ಟದೂರು, ಹಿರಿಯ  ಸ್ವಾತಂತ್ರ ಹೋರಾಟಗಾರರು, ಚಿತ್ರ ಕಲಾವಿದರು
*ಶ್ರೀ ಶಿವರಾಜ ಪಾಟೀಲ್ , ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರು
*ಶ್ರೀ ಜೆ.ಎಚ್.ಪಾಟೀಲ್,ನಿವೃತ್ತ ಕಾನೂನು ಉಪಕುಲಪತಿಗಳು.
*ಶ್ರೀ ಡಾ. ಪಂ. ನರಸಿಂಹಲು ವಡವಾಟಿ, ವಿಶ್ವ ವಿಖ್ಯಾತ ಕ್ಲಾರಿಯೋನೆಟ್ ವಾದಕರು, ಮಾಜಿ ಅಧ್ಯಕ್ಷರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ.
*ಶ್ರೀಮತಿ ವಡವಾಟಿ ಶಾರದಾ ಭರತ್, ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕರು, ರಾಜ್ಯದ ಖ್ಯಾತ ವಚನ ಸಂಗೀತ ಗಾಯಕರು, ಸದಸ್ಯರು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ.

== ಪ್ರಾಮುಖ್ಯತೆ  ==Raichur District has seven taluks: Raichur, Devadurga, Sindhanur, Manvi, Maski, Sirwar and Lingsugur. The capital of the district is the city of Raichur, which is 409 km from the state capital, Bangalore.

* ರಾಯಚೂರು ಜಿಲ್ಲೆಯ [[ಶಕ್ತಿನಗರ|ಶಕ್ತಿನಗರದಲ್ಲಿ]] ಇರುವ [[ಶಾಖೋತ್ಪನ್ನ ವಿದ್ಯುತ್|ಶಾಖೋತ್ಪನ್ನ ವಿದ್ಯುತ್‌ಸ್ಥಾವರ]] [[ಕರ್ನಾಟಕ|ಕರ್ನಾಟಕದಲ್ಲಿ]] ಬಳಸಲ್ಪಡುವ [[ವಿದ್ಯುಚ್ಛಕ್ತಿ | ವಿದ್ಯುಚ್ಛಕ್ತಿಯ]] ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. 
* [[ಲಿಂಗಸೂಗೂರು]] ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯು ದೇಶದಲ್ಲಿಯೇ ಅತಿ ಹೆಚ್ಚು ಚಿನ್ನದ ಅದಿರು ಹೊಂದಿರುವ ಗಣಿಯಾಗಿದೆ. ಅಶೋಕನ ಕಾಲದ ಮಸ್ಕಿ ಶಾಸನ ದೊರೆತಿರುವುದು ಇದೇ ತಾಲೂಕಿನ ಮಸ್ಕಿಯಲ್ಲಿದೆ. ಇದೇ ಶಾಸನದಲ್ಲಿ ''ದೇವನಾಂಪ್ರಿಯಸ ಅಸೋಕಸ'' ಎನ್ನುವ ಪ್ರಸಿದ್ಡ ಸಾಲಿದೆ. asoka shila shasana maski taluk naliedi (Editting by krishna narasappa yadav)
===== <ref>ಶಿರೋಲೇಖ</ref> =====
* [[ಸಿಂಧನೂರು]] ರಾಜ್ಯದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಭತ್ತ ಬೆಳೆಯುವ ಪ್ರದೇಶವಾಗಿದೆ. 
* ಲಿಂಗಸೂಗೂರು ತಾಲ್ಲೂಕಿನ [[ಮುದುಗಲ್]] ನಲ್ಲಿ ಐತಿಹಾಸಿಕ ಕೋಟೆ ಇದ್ದು, ಮೊಹರಂ ಆಚರಣೆ ವಿಜೃಂಭಣೆಯಿಂದ ಜರಗುತ್ತದೆ.ಹಾಗೂ  ಲಿಂಗಸೂಗೂರು ತಾಲ್ಲೂಕಿನ ಮಸ್ಕಿ ಗ್ರಾಮದಲ್ಲಿ ಅಶೋಕನ ಶೀಲಾಶಾಸನ ದೊರತಿದೆ.
* [[ಜಲದುರ್ಗ|ಜಲದುರ್ಗದಲ್ಲಿರುವ]] ಕೋಟೆ, ಅತ್ಯಂತ ವಿಶೇಷವಾಗಿ ನಿರ್ಮಿಸಲಾದ ಕೋಟೆಗಳಲ್ಲಿ ಒಂದಾಗಿದೆ.
* [[ಮಂತ್ರಾಲಯ|ಮಂತ್ರಾಲಯವು]] ರಾಯಚೂರಿನಿಂದ ಹತ್ತಿರದಲ್ಲಿದೆ.
* [[ಮಾನವಿ]]ಕೊನೆಯ ತಾಲೂಕು.ಈ ಮಾನವಿಯಲ್ಲಿ ದಾಸ ಸಾಹಿತ್ಯ ಉಗಮವಾಗಿದ್ದು. ವಿಜಯ ದಾಸರು ಮಾನವಿ ತಾಲೂಕಿನವರು.

==ಇದನ್ನೂ ನೋಡಿ==
*[[ರಾಯಚೂರು (ಲೋಕ ಸಭೆ ಚುನಾವಣಾ ಕ್ಷೇತ್ರ)]]

== ಬಾಹ್ಯ ಅಂತರ್ಜಾಲ ಸಂಪರ್ಕಗಳು ==
{{commons category|Raichur}}
*[http://www.raichur.nic.in ರಾಯಚೂರು ಜಿಲ್ಲೆಯ ಅಧಿಕೃತ ತಾಣ]
*[http://www.raichurcity.gov.in  ರಾಯಚೂರು ನಗರದ  ಅಧಿಕೃತ ತಾಣ]
*[http://www.mapsofindia.com/maps/karnataka/districts/raichur.htm ರಾಯಚೂರು ಜಿಲ್ಲೆಯ ನಕ್ಷೆ]

[[Category: ಕರ್ನಾಟಕದ ಜಿಲ್ಲೆಗಳು]]
[[ವರ್ಗ: ಕರ್ನಾಟಕದ ಪ್ರಮುಖ ಸ್ಥಳಗಳು]]
[[ವರ್ಗ: ರಾಯಚೂರು ಜಿಲ್ಲೆ]]
{{ಕರ್ನಾಟಕದ ಜಿಲ್ಲೆಗಳು}}
[[ವರ್ಗ:ಚುಟುಕು]]