Difference between revisions 284027 and 284028 on knwiki

=== ಮಕ್ಕಳ ಸಾಹಿತ್ಯ ===
------------------
ಮಕ್ಕಳ ಕವನ ವನ್ನು  ಮಕ್ಕಳ ಕಥೆ ಮೊದಲಾದವುಗಳನ್ನು ಬರೆದು ಮಕ್ಕಳ ಸಾಹಿತ್ಯ ಬೆಳಸಿದವರಲ್ಲಿ ದೇವುಡು ನರಸಿಂಹ ಶಾಸ್ತ್ರಿ , ಜಿ.ಪಿ.ರಾಜರತ್ನಂ ಕೆ.ವಿ.ಪುಟ್ಟಪ್ಪ , ಹೊಹಿಸಳ, ಟಿ.ಎಂ.ಆರ್.ಸ್ವಾಮಿ, ಕಲಾಕುಮಾರ (ಡಾ.ದೊಡ್ಡೇರಿ ವೆಂಕಟಗಿರಿರಾವ್. ) ಸಿದ್ದಯ್ಯ ಪುರಾಣಿಕ ಮೊದಲಾದವರು ಪ್ರಮುಖರು. ಪುರಂದರದಾಸರು ಚಿಕ್ಕಮಕ್ಕಳಿಗಾಗಿ ಕೆಲವು ಸಣ್ಣ -ಸರಳ ಹಾಡುಗಳನ್ನು ರಚಿಸಿದ್ದಾರೆ. 
*ಇಲ್ಲಿ ಕೆಲವು ಜನಪ್ರಿಯ  ಮಕ್ಕಳ ಕವನಗಳನ್ನು  ಉದಾಹರಣೆಗಾಗಿ ಕೊಟ್ಟಿದೆ :
(contracted; show full)* ಅಳಲು ಕಣ್ಣಿನಿಂದ ಮುತ್ತು ಸುರಿವುದು , ||೩||
-
* ಪಾಪ ಅತ್ತರಮ್ಮ ತಾನೂ ಅತ್ತು ಬಿಡವುದು 
* ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು || ೪ || 
-
* ಪಾಪ ಪಟ್ಟು ಹಿಡಿದ ಹಟವು ಸಾರ್ಥ ವಾಯಿತು 
* ಪರಚಿ ಪರಚಿ ಅಳುವುದೆಲ್ಲ ಅರ್ಥವಾಯಿತು  ||೫||
*ರಚನೆ: 
[[ಜಿ.ಪಿ.ರಾಜರತ್ನಂ]]

=== ಕಂದನು ಬಂದ ===
------------------
* ಕಂದನು ಬಂದುದು  ಎಲ್ಲಿಂದ ?
* ನೀಲಿಯ ಗಗನದ ಬಳಿಯಿಂದ ||೧||
-
* ಕಣ್ಣನು ಹೊಂದಿದನಾವಾಗ ?
* ಕಂದನ ಚಂದಿರ ಕಂಡಾಗ ||೨||
-
* ಕಣ್ಣನು ಕಳೆಯನು ಪಡೆದಿಹುದು
* ಅರಿವೇ ಮೋಹಿಸಿ ಕೊಟ್ಟುದುದು ||೩|| 
-
* ಕೆನ್ನೆಯುಕೆಂಪಾಗಿಹುದೇಕೆ ?
* ದೇವರ ಮುತ್ತನು ಪಡೆದುದಕೆ ||೪ ||
-
* ಯಾವಾಗಲು ನಗುವನದೇಕೆ ? 
* ನಾವರಿಯದುದನವನರಿತುದಕೆ
* (ನಾವು ಅರಿಯದುದನು ಅವನು ಅರತುದಕೆ  - ದೇವರನ್ನು ?)

*ರಚನೆ :ಕಲಾಕುಮಾರ ([[ಡಾ.ದೊಡ್ಡೇರಿ ವೆಂಕಟಗಿರಿರಾವ್]]).

=== ಆಧಾರ : === 
-------------
ಹಿಂದಿನ ಮೈಸೂರು ಸರ್ಕಾರದ ಪ್ರಾಥಮಿಕ ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ.
*[[ಕನ್ನಡ ಸಾಹಿತ್ಯ ಪ್ರಕಾರಗಳು]]

ವರ್ಗ : [[ಕನ್ನಡ ಸಾಹಿತ್ಯ]]