Difference between revisions 309810 and 309822 on knwiki

{{ಹಿಂದೂ ತತ್ವಶಾಸ್ತ್ರ}}
'''ದ್ವೈತ''' ಮತವು [[ಮಧ್ವಾಚಾರ್ಯ]]ರಿಂದ ಪ್ರವರ್ತಿತವಾಗಿದೆ.ಇದರ ಸಿದ್ಧಾಂತಗಳು  ಮೊದಲೇ ಇದ್ದುವಾದರೂ ಅದನ್ನು ಕ್ರೋಡೀಕರಿಸಿ ಸಿದ್ದಾಂತ ರೂಪದಲ್ಲಿ ಮಂಡಿಸಿದವರು ಮಧ್ವಾಚಾರ್ಯರು.ದ್ವೈತ ಎಂದರೆ ಎರಡು ಎಂದರ್ಥ.ಈ ಮತದಲ್ಲಿ [[ಜೀವ]],[[ಜಗತ್ತು]],[[ಪರಮಾತ್ಮ]]ಇವರ ಒಳಗೆ ಇಹ ಮತ್ತು ಪರಗಳಲ್ಲಿ ಪಾರಮಾರ್ಥಿಕವಾದ ಭೇದವಿದೆ ಎಂಬುದನ್ನು ಪ್ರತಿಪಾದಿಸಲಾಗಿದೆ.
==ದ್ವೈತಮತದ ತತ್ವಗಳು==

==ದ್ವೈತಮತದ ಸಿದ್ಧಾಂತಗಳು==
ದ್ವೈತಮತದ ಸಿದ್ಧಾಂತಗಳನ್ನು ಸ್ಥೂಲವಾಗಿ ಹೀಗೆ ಹೇಳಬಹುದು. ೧) [[ಭಗವಂತ]]ನು ಸರ್ವಶಕ್ತನೂ,ಸರ್ವೋತ್ತಮನೂ ಆಗಿದ್ದು [[ಜೀವ]]-[[ಜಗತ್ತು]]ಗಳ ನಿಮಿತ್ತಕಾರಕನಾಗಿದ್ದರೂ ಅವುಗಳಿಂದ '''ಪ್ರತ್ಯೇಕ'''ನಾಗಿರುತ್ತಾನೆ. ೨) [[ಜೀವ]]ರುಗಳು(ಆತ್ಮ) ಅಸಂಖ್ಯಾತ ಮತ್ತು ಅನಾದಿಯಾಗಿದ್ದು ಭಗವಂತನಿಂದ ಬೇರೆಯೇ ಆಗಿರುತ್ತಾರೆ. ಜೀವರುಗಳು ಯಾವಕಾಲಕ್ಕೂ ಭಗವಂತನೊಡನೆ (ಪರಮಾತ್ಮ)ನೊಡನೆ ಒಂದಾಗುವುದಿಲ್ಲ.ಭಗವಂತನು ಜೀವಿಗಳ ಅಂತರ್ಯಾಮಿಯಾಗಿರುತ್ತಾನೆ.ಜೀವಿಗಳ ಒಳಗೆ ಪರಸ್ಪರ ಭೇದವಿದೆ. ೩) ದ್ವೈತಮತದ ಪ್ರಕಾರ [[ಮೋಕ್ಷ]] ಎಂದರೆ ಜೀವನಿಗೆ ತನ್ನ ಅನಾದಿ ಅಜ್ಞಾನವು ಹೋಗಿ ಸ್ವಭಾವ ಜ್ಞಾನವಾಗುವುದೇ ಆಗಿದ್ದು ಸಂಸಾರದ ಬಂಧನದಿಂದ ಬಿಡುಗಡೆಯಾಗಿದೆ.ಜೀವರುಗಳೆಲ್ಲಾ ಮುಕ್ತಿಗೆ ಅರ್ಹರಾಗಿರದೆ ಅವರವರ ಯೋಗ್ಯತೆಗೆ ಅನುಗುಣವಾಗಿ ಮುಕ್ತಿ ಪ್ರಾಪ್ತವಾಗುತ್ತದೆ. ಮುಕ್ತಿಯ ನಂತರ ಜೀವನು ಭಗವಂತನಲ್ಲಿ ಲೀನವಾಗದೆ ಬೇರೆಯೇ ಆಗಿ ಉಳಿದು ಮುಕ್ತಿಯ ಸುಖ-ಆನಂದಗಳನ್ನು ತನ್ನ ಗುಣ ಯೋಗ್ಯತೆ ಅನುಗುಣವಾಗಿ ಅನುಭವಿಸುತ್ತಾನೆ. ೪) ದ್ವೈತ ಮತ ಅನುಸಾರ [[ಕರ್ಮ]],[[ಜ್ಞಾನ]],[[ಭಕ್ತಿ]]ಗಳು ಬೇರೆ ಬೇರೆಯಾಗಿರದೆ ಮೋಕ್ಷ ಸಾಧನೆಯ ಮೂರು ಹಂತಗಳಾಗಿವೆ.ಕರ್ಮ,ಜ್ಞಾನಗಳಿಂದ ಭಕ್ತಿ ಮೂಡಿ ಭಕ್ತಿಯಿಂದ ಮೋಕ್ಷ ಪ್ರಾಪ್ತಿಯಾಗುವುದು.
==ಬಾಹ್ಯ ಸಂಪರ್ಕಗಳು==
http://www.dlshq.org/download/hinduismbk.htm#_VPID_96

=== ನೋಡಿ ===
-----------------------------------
*[[ಮಧ್ವಾಚಾರ್ಯ]]
*[[ದ್ವೈತಮತ]]

== ಆಧಾರ ಗ್ರಂಥಗಳು==
೧.ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
[[ವರ್ಗ:ಹಿಂದೂ ಧರ್ಮ]]
[[ವರ್ಗ:ತತ್ವಶಾಸ್ತ್ರ]]

[[ವರ್ಗ:ಆಧ್ಯಾತ್ಮ]]

[[bn:দ্বৈত]]
[[en:Dvaita]]
[[es:Dvaita]]
[[fr:Dvaita]]
[[id:Dvaita]]
[[it:Dvaita]]
[[ml:ദ്വൈതം]]
[[pt:Dvaita]]
[[ru:Двайта-веданта]]
[[sa:मध्वसिद्धान्तः]]
[[sv:Dvaita]]
[[ta:துவைதம்]]
[[te:ద్వైతం]]
[[uk:Двайта]]