Difference between revisions 332536 and 332539 on knwiki=== ಮಕ್ಕಳ ಸಾಹಿತ್ಯ === ------------------ ಮಕ್ಕಳ ಕವನ ವನ್ನು ಮಕ್ಕಳ ಕಥೆ ಮೊದಲಾದವುಗಳನ್ನು ಬರೆದು ಮಕ್ಕಳ ಸಾಹಿತ್ಯ ಬೆಳಸಿದವರಲ್ಲಿ [[ದೇವುಡು ನರಸಿಂಹ ಶಾಸ್ತ್ರಿ]] , [[ಜಿ.ಪಿ.ರಾಜರತ್ನಂ]].[[ ಕೆ.ವಿ.ಪುಟ್ಟಪ್ಪ ]], [[ಹೊಯಿಸಳ]],[[ ಟಿ.ಎಂ.ಆರ್.ಸ್ವಾಮಿ]], ಕಲಾಕುಮಾರ ([[ಡಾ.ದೊಡ್ಡೇರಿ ವೆಂಕಟಗಿರಿರಾವ್]]. ) [[ಸಿದ್ದಯ್ಯ ಪುರಾಣಿಕ]] ಮೊದಲಾದವರು ಪ್ರಮುಖರು. ಪುರಂದರದಾಸರು ಚಿಕ್ಕಮಕ್ಕಳಿಗಾಗಿ ಕೆಲವು ಸಣ್ಣ -ಸರಳ ಹಾಡುಗಳನ್ನು ರಚಿಸಿದ್ದಾರೆ. *ಇಲ್ಲಿ ಕೆಲವು ಜನಪ್ರಿಯ ಮಕ್ಕಳ ಕವನಗಳನ್ನು ಉದಾಹರಣೆಗಾಗಿ ಕೊಟ್ಟಿದೆ : (contracted; show full) ಒಂದರಿಂದ ಹತ್ತು, ಊಟದ ಆಟವು ಮುಗಿದಿತ್ತು|| -- ಜಿ.ಪಿ ರಾಜರತ್ನಂ.|| </poem> * ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ === ಗೋವಿನ ಹಾಡು ಅಥವಾ ಪುಣ್ಯಕೋಟಿಯ ಕಥೆ === ------------------------------------------ ಗೋವಿನ ಹಾಡು (ಅಜ್ಞಾತ ಕವಿ ) ಈಗೋವಿನ ಹಾಡು ಕನ್ನಡನಾಡಿನಲ್ಲಿ ಪ್ರಸಿದ್ಧವಾದ ವಾದ ಒಂದು ಜನಪದ ಮಕ್ಕಳ ಕಾವ್ಯ . ಇದನ್ನು ಹಿಂದೆ ಪ್ರಾಥಮಿಕ ಶಾಲೆಯ ಮಕ್ಕಳ ಪಠ್ಯದಲ್ಲಿ ಸೇರಿಸಲಾಗಿತ್ತು . ಪ್ರತಿಯೊಬ್ಬರೂಇದನ್ನು ಕಲಿತು ಮಕ್ಕಳುದೊಡ್ಡವರು ಆದಿಯಗಿ ಇದರ ಕರುಣ ರಸದ ಕಾವ್ಯಾನಭವ ಪಡೆಯುತ್ತಿದ್ದರು. ಮಕ್ಕಳು ಸತ್ಯವನ್ನೇ ಹೇಳಬೇಕೆಂಬ ಆದರ್ಶವನ್ನ ಹೋದುತ್ತಿದ್ದರು . ಆದೆ ಈಗಿನ ವಿಚಾರ ವಂತರಾದ ಶಿಕ್ಷಣ ತಜ್ಞರು ಇದು ಮಕ್ಕಳಿಗೆ ಅತ ಆದರ್ಶವಾದ ಒಳ್ಲೆಯದಲ್ಲವೆಂದು ಮಕ್ಕಳ ಪಠ್ಯದಿಂದ ತೆಗೆದು ಹಕಿದಂತೆಎ ತೋರುತ್ತದೆ. ಈ ಗೋವನ ಹಾಡನ್ನೇ ಆಧಾರವಗಿಟ್ಟಕೊಂಡು ತಬ್ಬಲಿಯು ನೀನಾದೆ ಮಗನೆ ಎಂಬ ಚಲನಚಿತ್ರ ತೆಗೆಯಲಾಗಿದೆ (ಪುಣ್ಯಕೋಟಿ) . ಅದಕ್ಕೆ ಸಾಹಿತಿಗಳಾದ ಡಾ||ಎಲ್. ಎಸ್. ಭೈರಪ್ಪನವರ ಅದೇ ಹೆಸರಿನ ಕಾದಂಬರಿ ಆಧಾರ. ಅದನ್ನು ಬಿ.ವಿ.ಕಾರಂತ ಮತ್ತು ಗಿರೀಶ ಕಾರ್ನಾಡ್ ರವರು ಜಂಟಿಯಾಗಿ ನಿರ್ದೇಶಿಸಿದ್ದರು. ಅದಕ್ಕೆ ಭಾಸ್ಕರ ಚಂದಾವರ್ಕರವರ ಸಂಗೀತ ನಿರ್ದೇಶನ. ಆ ಚಿತ್ರ ಬಹಳ ಜನಪ್ರಿಯತೆ ಹೊಂದಿತ್ತು. ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊ ಳಿರುವ ಕಾಳಿಂಗ ನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು ||೧|| ಉದಯ ಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು ಮುದದಿ ತಿಲಕವ ಹಣೆಯೊಳಿಟ್ಟು ಚದುರ ಶಖೆಯನು ಹಾಕಿದ ||೨|| ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲ ಗೌಡನು ಬಳಸಿ ನಿಂದಿಹ ತುರುಗಳನ್ನು ಬಳಿಗೆ ಕರೆದನು ಹರುಷದಿ ||೩|| ಗಂಗೆ ಬಾರೆ ಗೌರಿ ಬಾರೇ ತುಂಗ ಭದ್ರೇ ತಾಯಿ ಬಾರೇ ಕಾಮಧೇನು ನೀನು ಬಾರೆಂದು ಪ್ರೇಮದಲಿ ಗೊಲ್ಲ ಕರೆದನು ||೪|| ಗೊಲ್ಲ ಕರೆದಾ ದನಿಯ ಕೇಳಿ ಎಲ್ಲ ಹಸುಗಳು ಬಂದು ನಿಂತು ಚಲ್ಲಿ ಸೂಸಿ ಹಾಲ ಕರೆಯಲು ಅಲ್ಲಿ ತುಂಬಿತು ಬಿಂದಿಗೆ ||೫|| ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಭುತನೆಚಿದೆಂಬ ವ್ಯಾಘ್ರನು ಅಬ್ಬರಿಸಿ ಹಸಿ ಹಸಿದು ಬೆಟ್ಟದ ಕಿಬ್ಬಿಯೊಳು ತಾನಿರ್ದನು (ತಾನಿದ್ದನು) ||೬|| ಸಿಡಿದು ರೋಷದಿ ಮೊರೆಯುತಾ ಹುಲಿ ಘುಡುಘುಡಿಸಿ ಭೋರಿಡುತ ಛಂಗನೆ ತುದುಕಲೆರಗಿದ ರಭಸಕಂಜಿ ಚದುರಿ ಹೋದವು ಹಸುಗಳು ||೭|| ಪುಣ್ಯಕೋಟಿ ಎಂಬ ಗೋವು ತನ್ನ ಕಂದನ ನೆನೆದುಕೊಂಡು ಮುನ್ನ ಹಾಲನು ಕೊಡುವೆನೆನುತ ಚೆನ್ನನೇ (ಚೆನ್ನಾಗಿ) ತಾ ಬರುತಿರೆ ||೮|| ಇಂದೆನಗೆ ಆಹಾರ ಸಿಕ್ಸಿತು ಎಂದು ಬೇಗನೆ ದುಷ್ಟ ವ್ಯಾಘ್ರನು ಬಂದು ಬಳಸಿ ಅಡ್ಡಗಟ್ಟಿ ನಿಂದನಾ ಹುಲಿರಾಯನು || ೯|| ಮೇಲೆ ಬಿದ್ದು ನಿನ್ನನೀಗಲೆ ಬೀಳ ಹೊಯ್ವೆನು ನಿನ್ನ ಹೊಟ್ಟೆಯ ಸೀಳಿ ಬಿಡುವೆನು ಎನುತ ಕೋಪದಿ ಖೂಳ ವ್ಯಾಘ್ರನು ಕೂಗಲು ||೧೦|| ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ ||೧೧|| ಹಸಿದ ವೇಳೆಗೆ ಸಿಕ್ಕಿದೊಡವೆಯ ವಶವ ಮಾಡದೆ ಬಿಡಲು -ನೀನು ನುಸುಳಿಹೋಗುವೆ ಮತ್ತೆ ಬರುವೆಯ ಹುಸಿಯನಾಡುವೆ ಎಂದಿತು ||೧೨|| ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ ಸತ್ಯ ವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಜಗದೀಶನು (ಪರಮಾತ್ಮನು) ||೧೩|| ಕೊಂದು ತಿನ್ನುವೆನೆಂ ಹುಲಿಗೆ ಚೆಂದದಿಂದಲಿ ಭಾಷೆಯಿತ್ತು ಕಂದ ನಿನ್ನು ನೋಡಿ ಹೋಗುವೆ ನೆಂದು ಬಂದಿತು ದೊಡ್ಡಿಗೆ ||೧೪|| ಆಮ್ಮ ನೀನು ಸಾಯಲೇಕೆ ನಮ್ಮ ತಬ್ಬಲಿ ಮಾಡಲೇಕೆ ಸುಮ್ಮನಿಲ್ಲಿಯೆ ನಿಲ್ಲೆನುತ್ತ ಅಮ್ಮನಿಗೆ ಕರು ಹೇಳಲು ||೧೫|| ಕೊಟ್ಟ ಭಾಷೆಗೆ ತಪ್ಪಲಾರೆನು ಕೆಟ್ಟಯೋಚನೆ ಮಾಡಲಾರೆನು ನಿಷ್ಠೆಯಿಂದಲಿ ಪೋಪೆನಲ್ಲಿಗೆ ಕಟ್ಟಕಡೆಗಿದು ಖಂಡಿತ || ೧೬|| ಆರ ಮೊಲೆಯನು ಕುಡಿಯಲಮ್ಮ ಆರ ಸೇರಿ ಬದುಕಲಮ್ಮ ಆರ ಬಳಿಯಲಿ ಮಲಗಲಮ್ಮ ಆರು ನನಗೆ ಹಿತವರು || ೧೭|| ಆಮ್ಮಗಳಿರಾ ಅಕ್ಕಗಳಿರಾ ನಮ್ಮ ತಾಯೊಡಹುಟ್ಟುಗಳಿರ ನಿಮ್ಮ ಕಂದ ನೆಂದು ಕಾಣಿರಿ ತಬ್ಬಲಿಯನೀ ಕರುವನು ||೧೮|| ಮುಂದೆ ಬಂದರೆ ಹಾಯಬೇಡಿ ಹಿಂದೆ ಬಂದರೆ ಒದೆಯಬೇಡಿ ಕಂದ ನಿಮ್ಮವನೆಂದು ಕಾಣಿರಿ ತಬ್ಬಲಿಯನೀ ಕರುವನು ||೧೯|| ಕಟ್ಟ ಕಡೆಯಲಿ ಮೇಯಬೇಡ ಬೆಟ್ಟದೊತ್ತಿಗೆ ಹೋಗಬೇಡ ದುಷ್ಟ ವ್ಯಾಘ್ರನು ಹೊಂಚುತಿರುವನು ನಟ್ಟ ನಡುವಿರು ಕಂದನೆ ||೨೦|| ತಬ್ಬಲಿಯು ನೀನಾದೆ ಮಗನೆ ಹೆಬ್ಬುಲಿಯ ಬಾಯನ್ನು ಹೊಗುವೆನು ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ ||೨೧|| ಗೋವು ಕರುವನು ಬಿಟ್ಟು ಬಂದು ಸಾವಕಾಶವ ಮಾಡದಂತೆ ಗವಿಯ ಬಾಗಿಲ ಸೇರಿನಿಂತು ತವಕದಲಿ ಹುಲಿಗೆಂದಿತು ||೨೨|| ಖಂಡವಿದೆ ಕೋ ಮಆಂಸವಿದೆ ಕೋ ಗುಂಡಿಗೆಯ ಬಿಸಿರಕ್ತವಿದೆ ಕೋ ಚಂಡ ವ್ಯಾಘ್ರನೆ ನೀದೆಲ್ಲವ ನುಂಡು ಸಂತಸದಿಂದಿರು ||೨೩|| ಪುಣ್ಯ ಕೋಟಿಯ ಮಾತ ಕೇಳಿ ಕಣ್ಣ ನೀರನು ಸುರಿಸಿ ನೊಂದು ಕನ್ನೆ ಯಿವಳನು ಕೊಂದು ತಿಂದರೆ ಎನ್ನ ಮೆಚ್ಚನು ದೇವನು (ಮೆಚ್ಚಾನಾ ಪರಮಾತ್ಮನು) ||೨೪|| ಎನ್ನ ಒಡಹುಟ್ಟಕ್ಕ ನೀನು ನಿನ್ನ ಕೊಂದು ಏನ ಪಡೆವೆನು (ನಿನ್ನ ಕೊಂದು ನಾನೇನ ಪಡೆವೆನು) ಎನ್ನುತಾ ಹುಲಿ ಹಾರಿ ನೆಗೆದು ತನ್ನ ಪ್ರಾಣವ ಬಿಟ್ಟತು ||೨೫|| *ಟಿಪ್ಪಣಿ : ಶಬ್ದಾರ್ಥ : -ಪರಿ =ಸಂಗತಿ, ರೀತಿ, ; ತಿಲಕ = ಹಣೆ ಬೊಟ್ಟು. ; ಶಿಖೆ =ಜುಟ್ಟು, ; ಬಳಸಿ =ಸುತ್ತುವರಿದು ; ತುರು =ಹಸು, ; ಮಲೆ = ಕಾ ಡಿನಿಂದ ಕೂಡಿದ ಬೆಟ್ಟ, ; ಕಿಬ್ಬಿ =ಬೆಟ್ಟದ ಇಳಿಜಾರು ; ಮೊರೆ ಗರ್ಜಿಸು , ; ತುಡುಕು = ಹಿಡಿ, ; ಮುನ್ನ = ಮೊದಲು ; ಬೀಳ ಹೊಯ್ = ಬೀಳುವಂತೆ ಹೊಡೆಯುವುದು ; ಖೂಳ =ದುಷ್ಟ ; ದೊಡ್ಡಿ =ಕೊಟ್ಟಿಗೆ ; ವಡವೆ =ವಸ್ತು ; ಹುಸಿ = ಸುಳ್ಳು ; ತಬ್ಬಲಿ ಅನಾಥ (ತಾಯಿ ಇಲ್ಲದವ ) ಒತ್ತಿಗೆ = ಹತ್ತಿರಕ್ಕೆ , ಪಕ್ಕಕ್ಕೆ ; ತವಕ = ಅವಸರ ; ಬೇಗ ; ಕೋ =ಕೊಳ್ಳು , ತೆಗೆದುಕೋ ; ಚಂಡ =ಉಗ್ರ , ಭಯಂಕರ . *[[ಗೋವಿನ ಹಾಡು]] ಇನ್ನೂ ಹೆಚ್ಚಿನ ವಿವರಕ್ಕೆ === ಆಧಾರ : === ------------- ಹಿಂದಿನ ಮೈಸೂರು ಸರ್ಕಾರದ ಪ್ರಾಥಮಿಕ ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ. *[[ಕನ್ನಡ ಸಾಹಿತ್ಯ ಪ್ರಕಾರಗಳು]] ವರ್ಗ : [[ಕನ್ನಡ ಸಾಹಿತ್ಯ]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=332539.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|