Difference between revisions 715448 and 861101 on knwiki

ದ್ವೈತ ಮತದ ಪ್ರತಿಷ್ಠಾಪನಾಚಾರ್ಯರಾದ ಶ್ರೀ [[ಮಧ್ವಾಚಾರ್ಯ]]ರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು. ಒಂದೊಂದು ಮಠಕ್ಕೆ ಒಬ್ಬೊಬ್ಬ ಸನ್ನ್ಯಾಸಿ ಶಿಷ್ಯರನ್ನು ಪೀಠಾಧೀಶರನ್ನಾಗಿಸಿ, ತಾವು ಸ್ಥಾಪಿಸಿದ [[ಕೃಷ್ಣ ಮಠ|ಕೃಷ್ಣ ಮಠದಲ್ಲಿ]] ಶ್ರೀ ಕೃಷ್ಣನ ಪೂಜೆಗೆ ನೇಮಿಸಿದರು. ಪರ್ಯಾಯ ವ್ಯವಸ್ಥೆಯಲ್ಲಿ ಶ್ರೀ ಕೃಷ್ಣನನ್ನು ಪೂಜಿಸಬೇಕೆಂದು ಕಲ್ಪಿಸಿಕೊಟ್ಟರು.


== ಅಷ್ಟಮಠಗಳು ==
ಪರ್ಯಾಯ ವ್ಯವಸ್ಥೆಯ ಅನುಕ್ರಮದಲ್ಲಿ ಈ ಮಠಗಳ ಹೆಸರು ಹೀಗಿವೆ: 
ಫಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣಿಯೂರು ಮತ್ತು ಪೇಜಾವರ.
== ಮೊದಲ ಪೀಠಾಧೀಶರು ==
ಶ್ರೀಮಧ್ವಾಚಾರ್ಯರು ತಮ್ಮ ಈ ಶಿಷ್ಯರನ್ನು ಮಠಗಳಿಗೆ ಪೀಠಾಧೀಶರನ್ನಾಗಿ ನೇಮಿಸಿದರು. ಅವರವರಿಗೆ ಉಪಾಸನೆಗಾಗಿ ದೇವರ ಮೂರ್ತಿಗಳನ್ನೂ ನೀಡಿದರು. ಈ ಮೂರ್ತಿಗಳನ್ನು ಇಂದಿಗೂ ಪೀಠಾಧೀಶರು ತಮ್ಮ ಉಪಾಸನೆಯಲ್ಲಿ ಪೂಜಿಸುತ್ತಾರೆ. ಇವುಗಳಲ್ಲಿ ಕ್ರಮವಾಗಿ ಎರಡೆರಡು ಮಠಗಳ ಗುಂಪನ್ನು ದ್ವಂದ್ವಮಠಗಳೆಂದು ಕರೆಯುತ್ತಾರೆ. 
{| class="wikitable"
|-
! ಕ್ರ. ಸಂ. !! ಮಠದ ಈಗಿನ ಹೆಸರು !! ಮೂಲಯತಿಗಳು !! ಸಂಸ್ಥಾನ ಮೂರ್ತಿಗಳು
|-
| ೧ || ಫಲಿಮಾರು || ಶ್ರೀ ಹೃಷೀಕೇಶ ತೀರ್ಥರು || ಸೀತಾಲಕ್ಷ್ಮಣ ಸಹಿತ ಶ್ರೀ ರಾಮಚಂದ್ರ ದೇವರು
|-
| ೨ || ಅದಮಾರು || ಶ್ರೀ ನರಸಿಂಹ ತೀರ್ಥರು || ಕಾಲಿಯಮರ್ದನ ಚತುರ್ಭುಜ ಶ್ರೀಕೃಷ್ಣ ದೇವರು
|-
| ೩ || ಕೃಷ್ಣಾಪುರ || ಶ್ರೀ ಜನಾರ್ದನ ತೀರ್ಥರು || ಕಾಲಿಯಮರ್ದನ ದ್ವಿರ್ಭುಜ ಶ್ರೀಕೃಷ್ಣ ದೇವರು
|-
| ೪ || ಪುತ್ತಿಗೆ || ಶ್ರೀ ಉಪೇಂದ್ರ ತೀರ್ಥರು || ಶ್ರೀ ವಿಟ್ಠಲ ದೇವರು
|-
| ೫ || ಶಿರೂರು || ಶ್ರೀ ವಾಮನ ತೀರ್ಥರು || ಶ್ರೀ ವಿಟ್ಠಲ ದೇವರು
|-
| ೬ || ಸೋದೆ || ಶ್ರೀ ವಿಷ್ಣು ತೀರ್ಥರು || ಶ್ರೀ ವರಾಹ ದೇವರು
|-
| ೭ || ಕಾಣಿಯೂರು || ಶ್ರೀ ರಾಮ ತೀರ್ಥರು || ಶ್ರೀ ನರಸಿಂಹ ದೇವರು
|-
| ೮ || ಪೇಜಾವರ || ಶ್ರೀ ಅಧೋಕ್ಷಜ ತೀರ್ಥರು || ಶ್ರೀ ವಿಟ್ಠಲ ದೇವರು
|}
== ಈ ಲೇಖನಗಳನ್ನೂ ನೋಡಿ ==
* [[ಮಧ್ವಾಚಾರ್ಯ]]
* [[ಕೃಷ್ಣ ಮಠ]]
== ಆಧಾರಗಳು ==
* ಶ್ರೀ ಹೃಷೀಕೇಶ ತೀರ್ಥರು ಬರೆದ ಸಂಪ್ರದಾಯಪದ್ಧತಿ ಎಂಬ ಸಂಸ್ಕೃತ ಕೃತಿ
[[ವರ್ಗ:ಮಠಗಳು]]