Difference between revisions 747401 and 747822 on knwiki

{{ಹಿಂದೂ ಧರ್ಮಗ್ರಂಥಗಳು}}

'''ಭವಿಷ್ಯ ಪುರಾಣ''' ಹದಿನೆಂಟು [[ಪುರಾಣ]]ಗಳಲ್ಲಿ ಒಂದು. ಇದು [[ಸಂಸ್ಕೃತ]]ದಲ್ಲಿ ಬರೆಯಲ್ಪಟ್ಟಿದೆ ಮತ್ತು [[ವೇದ]]ಗಳ ಸಂಕಲಕ [[ವ್ಯಾಸ]]ರು ಕಾರಣರಿರಬಹುದೆಂದು ಹೇಳಲಾಗುತ್ತದೆ. ಇದರಲ್ಲಿ ಹಲವಾರು ರಾಜ ಮಹಾರಾಜರುಗಳ ಕಥೆ, ಬ್ರಾಹ್ಮಣ ವ್ರತಾಚರಣೆಗಳು, ಸ್ತ್ರೀಯರ ಕರ್ತವ್ಯಗಳು, [[ಬ್ರಹ್ಮ]], [[ಸ್ಕಂದ]], [[ಗಣೇಶ]]ರ ಪೂಜಾ ವಿಧಾನಗಳು ಮುಂತಾದವುಗಳು ಅಡಕವಾಗಿವೆ.
(ಭವಿಷ್ಯ ಪುರಾಣದ ಪ್ರತಿಸರ್ಗದ ಪ್ರಥಮ ಖಂಡದಲ್ಲಿ. ಏಳು ಅಧ್ಯಾಯವನ್ನೊಳಗೊಂಡಿದೆ


   ಒಂದನೆಯ ಅಧ್ಯಾಯ -
ಕೃತಯುಗದ ಭೊಪರ ವೃತ್ತಾಂತ
(contracted; show full)

೧೮-೧೯) ಅಲ್ಲಿಯೇ ವಿಷ್ಣುಕರ್ದಮದಿಂದ ಮ್ಲೇಚ್ಚವಂಶಪ್ರವರ್ಧಕರಾದ ಆದಮನೆಂಬ ಪುರುಷನೂ,ಅವನಿಗೆ ಹೆಂಡತಿಯಾದ ಹವ್ಯವತಿಯೆಂಬ ಹೆಂಗಸೂ,ಹುಟ್ಟಿದರು .ವಿಷ್ಣುವು ಅಲ್ಲೆ ಮಾಯವಾದನು .ಆನಂದರಾಶಿಯಾದ ಕಲಿಯು ನೀಲಗಿರಿಗೆ ಹೋಗಿ ಅಲ್ಲಿ ಕೆಲವು ಕಾಲ ವಾಸಮಾಡಿದನು .

೨೦) ಇತ್ತ ವೇದವಂತರಾಜನಿಗೆ ಸುನಂದನೆಂಬ ಪುತ್ರನುದಿಸಿದನು ‌


೨೧-೨೨) ಸುನಂದರಾಜನೂ ತಂದೆಯಂತೆಯೇ ಎರೆಡುಸಾವಿರ ವರ್ಷಗಳ ಕಾಲ ಆಳಿದನು .ಆತನು ಮಕ್ಕಳಿಲ್ಲದವನಾಗಿ ಮೃತನಾದನು .ಹೇ ಭೃಗುಶ್ರೇಷ್ಠನೇ! ಆರ್ಯದೇಶಗಳು ಕ್ಷೀಣವಾಗುತ್ತಲೂ ಮ್ಲೇಚ್ಚದೇಶಗಳೂ ಬಲವಾಗುತ್ತಲೂ ಬರುತ್ತಿವೆ .ಆದುದರಿಂದ ನಾವು ಹಿಮಾಚಲಕ್ಕೆ ಹೋಗಿ ವಿಷ್ಣುವನ್ನು ಆರಾದಿಸಿ ವಿಷ್ಣುಪದವನ್ನ ಪಡೆಯೊಣ"ಎಂದು ಹೇಳಿದರು 

೨೩ )  ನೈಮಿಷಾರ್ಯಣದಲ್ಲಿ ವಾಸಿಸುತ್ತದ್ದ ಬ್ರಹ್ಮಣರೆಲ್ಲರೂ ಸೂತಮುನಿಯ ಈ ಮಾತನ್ನು ಕೇಳಿ ಅವರು ಎಂಬತ್ತೆಂಟು ಸಾವಿರ ಜನರೂ ಹಿಮಾಚಲಕ್ಕೆ ಹೋದರು .

೨೪)  ಅಲ್ಲಿ ವಿಶಾಲ ಎಂಬ ಸ್ಥಳದಲ್ಲಿ ಸೇರಿ ಸರ್ವರೂ ವಿಷ್ಣುಕತೆಯನ್ನ ಶ್ರವಣಮಾಡಿದರು .

೨೫)  ಮತ್ತು ಸೂತಮುನಿಯು ಹಿಂದೆ ವ್ಯಾಸಮಹರ್ಷಿಯಿಂದ ತಮಗೆ ತಿಳಿಸಲ್ಪಟ್ಟ ಕಲಿಯುಗದ ಭವಿಷ್ಯವನ್ನು ವಿವರಿಸಲಾರಂಭಿಸಿದನು .ವ್ಯಾಸರಾದರೊ ತಮ್ಮ ಮನಸ್ಸನ್ನೇ ಶ್ರೋತೃವನ್ನಾಗಿ ಭಾವಿಸಿ .ಕಲಿಯುಗ ಭವಿಷ್ಯವನ್ನು ಹಿಂದೆ ಹೇಳಿದ್ದರು .ಹೇಗೆಂದರೆ :ಎಲೈ ಮನಸ್ಸೇ! ಮುಂದೆ ಸೂತನು ಯುಗಧರ್ಮವನ್ನ ವಿವರಿಸುವನು .ಅದನ್ನೇ ಈಗ ನಿನಗೆ ಸ್ವಲ್ಪಮಟ್ಟಿಗೆ ವಿವರಿಸುವೆನು .ಅದರಲ್ಲಿ ಕಲಿಯುಗದಲ್ಲಿ ನೆಡೆಯುವ ಸಂಪೂರ್ಣ ವಿಷಯಗಳು ನಿನಗೆ ತಿಳಿದಂತಾಗುವುದು .ಅದರಿಂದ ನೀನು ತೃಪ್ತನಾಗು " ಎಂದು ಹೇಳಿದ್ದರು .

೨೬ -೨೭ ) ದ್ವಾಪರಯುಗವು ಪೂರ್ಣವಾಗುದ್ದಕ್ಕೆ ಹದಿನಾರು ಸಾವಿರ ವರ್ಷ ಉಳಿದಿರುವಾಗ ಆರ್ಯದೇಶದ ರಾಜ್ಯಗಳು ಬಹಳ ಯಶಸ್ವಿತೆಯನ್ನು ಪಡೆದವು .ಕೇಲವು ಬ್ರಾಹ್ಮಣರು ಪ್ರಭುಗಳು ,ಕೇಲವರು ಹೀನ ವಂಶದ ಕ್ಷತ್ರಿಯರು ರಾಜರು ,ಕೆಲವರು ವೈಶ್ಯ ಪ್ರಭುಗಳು ,ಕೆಲವು ಕಡೆ ಶೊದ್ರ ಜಾತಿಯವರು ಪ್ರಭುಗಳು ಆಗುವರು .

೨೮) ಎಲ್ಲೆಲ್ಲಿಯೂ ಜಾತಿಸಂಕರ್ಯವು ಕಾಣುವುದು ದ್ವಾಪರಯುಗವು ಎಂಟುಸಾವಿರ ವರ್ಷಗಳು ಉಳಿದಿದೆ ಎನ್ನುವಾಗ ಮ್ಲೇಚ್ಚರಾಜ್ಯವು ಕೀರ್ತಿಯಾಗುವುದು ‌.

೨೯-೩೦) ಪರಮಾತ್ಮಧ್ಯಾನದಲ್ಲಿ ಆಸಕ್ತನಾಗಿ ಇಂದ್ರಿಯಗಳನ್ನು ದಮನ ಮಾಡಿದ್ದವನಾದ್ದರಿಂದ ಆದಮನೆಂಬ ಹೇಸರುಳ್ಳ ಮಹಾತ್ಮನು ಅಲ್ಲಿರುವನು  .ಅವನಿಗೆ ಹವ್ಯವತೀಯೆಂಬ ಪತ್ನಿರುವಳು ಪ್ರಧಾನನಗರದ ಪೂರ್ವದಿಗ್ಭಾಗದಲ್ಲಿ ನಾಲ್ಕು ಕ್ರೋಶ ವಿಸ್ತೀರಗಣವುಳ್ಳದ್ದೂ ಈಶ್ವರನಿಂದ ರಚಿತವಾಗಿ ರಮ್ಯವಾದುದೂ ಅದ ಮಹಾವನವೆಂಬುದು ಇರುವುದು .

೩೧-೩೨) ಕಲಿಯು ಆತನ ಪತ್ನಿಯನ್ನು ನೋಡಲು ಆಸಕ್ತನಾಗಿ ಸರ್ಪರೊಪದಿಂದ ಆ ಮಹಾವನದಲ್ಲಿದ್ದ ಪಾಪವೃಕ್ಷದ ಮೂಲಕ್ಕೆ ತೀವ್ರವಾಗಿ ಬಂದನು .ಅಲ್ಲಿ ಆ ಧೂರ್ತನಾದ ಕಲಿಯು ಆಕೆಗೆವಂಚನೆಮಾಡಿ ಕಾರ್ಯಸಾಧಿಸಿಕೊಂಡನು .ಇದರಿಂದ ವಿಷ್ಣುವಿನ ಆಜ್ಞೆಯನ್ನು ಆಕೆ ಉಲ್ಲಂಘಿಸಿದ ಹಾಗಾಯಿತು .


ಐದನೆಯ ಅಧ್ಯಾಯ -
  ನ್ಯೊಹವಂಶ ವರ್ಣನೆ ,ಮ್ಲೇಚ್ಚಭಾಷೆಯ ಉತ್ಪತ್ತಿ ವಿಧಾನ 

ಆರನೆಯ ಅಧ್ಯಾಯ-
  ಮ್ಲೇಚ್ಚರು ಆರ್ಯವರ್ತಕ್ಕೆ ಬಾರದಿರಲು ಕಾರಣ ,ಕಾಶ್ಯಪ ಬ್ರಹ್ಮಣ ವೃತ್ತಾಂತ ವರ್ಣನೆ 

ಏಳನೆಯ ಅಧ್ಯಾಯ -
  ಪ್ರಮರ ವಂಶದಲ್ಲಿ ವಿಕ್ರಮಾದಿತ್ಯನ ಉತ್ಪತ್ತಿ

(ಪ್ರಥಮಖಂಡ ಸಮಾಪ‌್ತಿ)
[[ವರ್ಗ:ಪುರಾಣ]]
[[ವರ್ಗ:ಹಿಂದೂ ಧರ್ಮಗ್ರಂಥಗಳು]]