Difference between revisions 861129 and 913589 on knwikiದ್ವೈತ ಮತದ ಪ್ರತಿಷ್ಠಾಪನಾಚಾರ್ಯರಾದ ಶ್ರೀ [[ಮಧ್ವಾಚಾರ್ಯ]]ರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು. ಒಂದೊಂದು ಮಠಕ್ಕೆ ಒಬ್ಬೊಬ್ಬ ಸನ್ಯಾಸಿ ಶಿಷ್ಯರನ್ನು ಪೀಠಾಧೀಶರನ್ನಾಗಿಸಿ, ತಾವು ಸ್ಥಾಪಿಸಿದ [[ಕೃಷ್ಣ ಮಠ|ಕೃಷ್ಣ ಮಠದಲ್ಲಿ]] ಶ್ರೀ ಕೃಷ್ಣನ ಪೂಜೆಗೆ ನೇಮಿಸಿದರು. ಪರ್ಯಾಯ ವ್ಯವಸ್ಥೆಯಲ್ಲಿ ಶ್ರೀ ಕೃಷ್ಣನನ್ನು ಪೂಜಿಸಬೇಕೆಂದು ಕಲ್ಪಿಸಿಕೊಟ್ಟರು. == ಅಷ್ಟಮಠಗಳು == ಪರ್ಯಾಯ ವ್ಯವಸ್ಥೆಯ ಅನುಕ್ರಮದಲ್ಲಿ ಈ ಮಠಗಳ ಹೆಸರು ಹೀಗಿವೆ: ಫಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣಿಯೂರು ಮತ್ತು ಪೇಜಾವರ. == ಮೊದಲ ಪೀಠಾಧೀಶರು == ಶ್ರೀಮಧ್ವಾಚಾರ್ಯರು ತಮ್ಮ ಈ ಶಿಷ್ಯರನ್ನು ಮಠಗಳಿಗೆ ಪೀಠಾಧೀಶರನ್ನಾಗಿ ನೇಮಿಸಿದರು. ಅವರವರಿಗೆ ಉಪಾಸನೆಗಾಗಿ ದೇವರ ಮೂರ್ತಿಗಳನ್ನೂ ನೀಡಿದರು. ಈ ಮೂರ್ತಿಗಳನ್ನು ಇಂದಿಗೂ ಪೀಠಾಧೀಶರು ತಮ್ಮ ಉಪಾಸನೆಯಲ್ಲಿ ಪೂಜಿಸುತ್ತಾರೆ. ಇವುಗಳಲ್ಲಿ ಕ್ರಮವಾಗಿ ಎರಡೆರಡು ಮಠಗಳ ಗುಂಪನ್ನು ದ್ವಂದ್ವಮಠಗಳೆಂದು ಕರೆಯುತ್ತಾರೆ. {| class="wikitable" |- ! ಕ್ರ. ಸಂ. !! ಮಠದ ಈಗಿನ ಹೆಸರು !! ಮೂಲಯತಿಗಳು !! ಸಂಸ್ಥಾನ ಮೂರ್ತಿಗಳು !! ಈಗಿನ ಯತಿಗಳು |- | ೧ || ಫಲಿಮಾರು || ಶ್ರೀ ಹೃಷೀಕೇಶ ತೀರ್ಥರು || ಸೀತಾಲಕ್ಷ್ಮಣ ಸಹಿತ ಶ್ರೀ ರಾಮಚಂದ್ರ ದೇವರು |- | ೨ || ಅದಮಾರು || ಶ್ರೀ ನರಸಿಂಹ ತೀರ್ಥರು || ಕಾಲಿಯಮರ್ದನ ಚತುರ್ಭುಜ ಶ್ರೀಕೃಷ್ಣ ದೇವರು |- | ೩ || ಕೃಷ್ಣಾಪುರ || ಶ್ರೀ ಜನಾರ್ದನ ತೀರ್ಥರು || ಕಾಲಿಯಮರ್ದನ ದ್ವಿರ್ಭುಜ ಶ್ರೀಕೃಷ್ಣ ದೇವರು |- | ೪ || ಪುತ್ತಿಗೆ || ಶ್ರೀ ಉಪೇಂದ್ರ ತೀರ್ಥರು || ಶ್ರೀ ವಿಟ್ಠಲ ದೇವರು |- | ೫ || ಶಿರೂರು || ಶ್ರೀ ವಾಮನ ತೀರ್ಥರು || ಶ್ರೀ ವಿಟ್ಠಲ ದೇವರು |- | ೬ || ಸೋದೆ || ಶ್ರೀ ವಿಷ್ಣು ತೀರ್ಥರು || ಶ್ರೀ ವರಾಹ ದೇವರು |- | ೭ || ಕಾಣಿಯೂರು || ಶ್ರೀ ರಾಮ ತೀರ್ಥರು || ಶ್ರೀ ನರಸಿಂಹ ದೇವರು |- | ೮ || ಪೇಜಾವರ || ಶ್ರೀ ಅಧೋಕ್ಷಜ ತೀರ್ಥರು || ಶ್ರೀ ವಿಟ್ಠಲ ದೇವರು |} ⏎ ⏎ == ಈ ಲೇಖನಗಳನ್ನೂ ನೋಡಿ == * [[ಮಧ್ವಾಚಾರ್ಯ]] * [[ಕೃಷ್ಣ ಮಠ]] *[[ಅಷ್ಟ ಮಠಗಳು]] == ಆಧಾರಗಳು == * ಶ್ರೀ ಹೃಷೀಕೇಶ ತೀರ್ಥರು ಬರೆದ ಸಂಪ್ರದಾಯಪದ್ಧತಿ ಎಂಬ ಸಂಸ್ಕೃತ ಕೃತಿ [[ವರ್ಗ:ಮಠಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=913589.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|