Revision 1031925 of "ಪ್ರೊ.ಜಿ.ವೆಂಕಟಸುಬ್ಬಯ್ಯ" on knwiki{{Infobox Writer
<!-- For template details please see Template:Infobox Writer -->
| name = ಜಿ. ವೆಂಕಟಸುಬ್ಬಯ್ಯ
| image = G_Venkatasubbaiah.jpg
| imagesize =200px
| caption =
| pseudonym =
| birth_date = ೨೩-೦೮-೧೯೧೩
| birth_place = [[ಮೈಸೂರು]]
| death_date = ೧೯ ಏಪ್ರಿಲ್, ೨೦೨೧
| death_place = ಬೆಂಗಳೂರು
| occupation = ಭಾಷಾತಜ್ಞ, ಕನ್ನಡ ನಿಘಂಟು ತಜ್ಞ, ಬರಹಗಾರ, ಸಂಶೋಧಕ, ಶಿಕ್ಷಕ, ಚಿಂತಕ,
| nationality = ಭಾರತೀಯ
| period = 20ನೇ ಶತಮಾನ
| genre =
| subject = [[ಕನ್ನಡ ಸಾಹಿತ್ಯ]]
| movement =
| debut_works =
| notableworks = [[ಇಗೋ ಕನ್ನಡ]]
| spouse = ಲಕ್ಷ್ಮಿ
| children = ೪
| influences = [[ಪು.ತಿ.ನರಸಿಂಹಾಚಾರ್]], [[ಬಿ.ಎಂ.ಶ್ರೀ]], [[ಕುವೆಂಪು]]
| influenced =
| awards = [[ಪದ್ಮಶ್ರೀ]] (೨೦೧೭), [[ಭಾಷಾ ಸಮ್ಮಾನ್]](೨೦೧೮)
| signature =
| website =
| footnotes =
}}
'''ಪ್ರೊ||ಗಂಜಾಂ ವೆಂಕಟಸುಬ್ಬಯ್ಯ''' (೨೩,ಆಗಸ್ಟ್,೧೯೧೩-೧೯,ಏಪ್ರಿಲ್,೨೦೨೧) ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ತಜ್ಞರು. ಇವರ '[[ಇಗೋ ಕನ್ನಡ]]' ಎಂಬ [[ಪ್ರಜಾವಾಣಿ]] ಅಂಕಣ ಸಮಸ್ತ ಕನ್ನಡಿಗರಿಗೆ ಪರಿಚಿತವಾಗಿದೆ. ೧೯೯೧ ರಿಂದ ವೆಂಕಟಸುಬ್ಬಯ್ಯನವರು ಈ ಅಂಕಣದ ಮೂಲಕ ಕನ್ನಡ ಭಾಷೆಯ ಪದಗಳನ್ನು ಓದುಗರಿಗೆ ಹತ್ತಿರಗೊಳಿಸಿದವರು. ಇವರ ಭಾಷಾ ಸಾಹಿತ್ಯ ಕೊಡುಗೆಗೆ ೨೦೦೫ರಲ್ಲಿ, ಹಂಪೆ ವಿಶ್ವವಿದ್ಯಾಲಯವು ಇವರಿಗೆ ಪ್ರತಿಷ್ಠಿತ [[ನಾಡೋಜ ಪ್ರಶಸ್ತಿ]]ಯನ್ನು ನೀಡಿದೆ. ಇವರು ಬೆಂಗಳೂರಿನಲ್ಲಿ ನಡೆದ ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. <ref>[https://starofmysore.com/kannada-linguist-grammarian-teacher-writer-and-lexicographer-g-venkatasubbiah-turns-107/ Kannada Linguist, Grammarian, Teacher, Writer And Lexicographer… G. Venkatasubbiah Turns 107 Aug 23, 2020,Star of Mysore] </ref>
==ಜೀವನ==
೧೯೧೩ರಲ್ಲಿ ಮೈಸೂರಿನಲ್ಲಿ ಜನಿಸಿದ ವೆಂಕಟಸುಬ್ಬಯ್ಯನವರು, ಮೈಸೂರಿನಲ್ಲಿಯೆ ಬೆಳೆದವರು. ಇವರ ತಂದೆ [[ಗಂಜಾಂ ತಿಮ್ಮಣ್ಣಯ್ಯ]]ನವರು ಸಂಸ್ಕೃತ ಹಾಗು ಕನ್ನಡದ ವಿದ್ವಾಂಸರಾಗಿದ್ದರು. ೧೯೩೭ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಎಂ.ಎ. ಪದವಿಯನ್ನು ಪಡೆದ ಇವರಿಗೆ ಪ್ರಥಮ ಸ್ಥಾನ ಪಡೆದದ್ದಕ್ಕಾಗಿ [[ಸುವರ್ಣಪದಕ]]ವನ್ನು ಬಹುಮಾನವಾಗಿ ಕೊಡಲಾಯಿತು. ಮುಂದೆ ಇವರು ಬಿ.ಟಿ. ಪದವಿಯನ್ನೂ ಕೂಡ ಪಡೆದರು. ೧೯೩೯ ರಿಂದ ಪ್ರಾರಂಭಿಸಿ ಸುಮಾರು ೪೦ ವರ್ಷಗಳ ಕಾಲ ಇವರು [[ಶಿಕ್ಷಣ]] ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವರು.<ref>[http://www.deccanherald.com/content/276167/teacher-par-excellence.html Teacher par excellence], Deccan Herald, Sep 4, 2012 </ref>
==ಇಗೋ ಕನ್ನಡ==
'[[ಇಗೋ ಕನ್ನಡ]]' - ೧೨-೫-೯೧ ರಿಂದ ಕನ್ನಡದ ಜನಪ್ರಿಯ ಪತ್ರಿಕೆಯಾದ [[ಪ್ರಜಾವಾಣಿ | ಪ್ರಜಾವಾಣಿಯಲ್ಲಿ]] ಪುಟ್ಟ ಅಂಕಣವಾಗಿ ಪ್ರಾರಂಭವಾಯಿತು. ಕನ್ನಡದ ಶಿಷ್ಟ ಬರವಣಿಗೆಯನ್ನು ಸಾರ್ವಜನಿಕರಿಗೆ ತಿಳಿಯ ಪಡಿಸಲು ಆರಂಭಿಸಿದ ಈ ಅಂಕಣವು ಕೆಲವೇ ದಿನಗಳಲ್ಲಿ ಹಲವರ ಗಮನವನ್ನೂ, ಉತ್ಸಾಹವನ್ನೂ ತನ್ನತ್ತ ಸೆಳೆಯಿತು. ಕನ್ನಡವನ್ನು ಅಭ್ಯಾಸ ಮಾಡಿದವರಿಂದಲೂ, ಶ್ರೀಸಾಮಾನ್ಯರಿಂದಲೂ ಬಂದ ವೈವಿಧ್ಯಮಯ ಪ್ರಶ್ನೆಗಳಿಗೆ ಉತ್ತರ ನೀಡುವುದರಲ್ಲಿ ತೊಡಗಿಸಿಕೊಂಡ ಈ ಅಂಕಣ, ಹಲವರ ಭಾಷೆಗೆ ಸಂಬಂಧಿಸಿದ ಸಂದೇಹಗಳನ್ನು ನಿವಾರಣೆ ಮಾಡಿತು. ಇಂತಹ ಭಾಷೆಗೆ ಸಂಬಂಧಿಸಿದ ಪ್ರಶ್ನೋತ್ತರಗಳನ್ನು ಒಟ್ಟುಗೂಡಿಸಿ ವೆಂಕಟಸುಬ್ಬಯ್ಯನವರು ಇಗೋ ಕನ್ನಡ ಎಂಬ ಹೆಸರಲ್ಲೇ ಒಂದು ಸಾಮಾಜಿಕ [[ನಿಘಂಟು|ನಿಘಂಟನ್ನು]] ಹೊರತಂದದ್ದುಂಟು.<ref>[http://www.bangalorewaves.com/news/bangalorewaves-news.php?detailnewsid=2916 genius Kannada lexicographer who turns 100 bangalorewaves. August 23, 2012]</ref>
==ಪ್ರಶಸ್ತಿಗಳು/ಗೌರವ ಪುರಸ್ಕಾರಗಳು==
* [[ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ]]
* ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ.
* [[ಪಂಪ ಪ್ರಶಸ್ತಿ]] (೨೦೧೫)
೦೭/೦೨/೨೦೧೫. ಬನವಾಸಿಯಲ್ಲಿ ಹುಟ್ಟಲು ಪುಣ್ಯಮಾಡಿರಬೇಕು, ಎಂಬ ಆದಿಕವಿ ಪಂಪನ ಮಾತನ್ನು ಹೇಳುತ್ತ ಪಂಪ ಪ್ರಶಸ್ತಿಗೆ ಭಾಜನರಾದ 101 ವರ್ಷದ, ಪ್ರೊ. ಜಿ.ವೆಂಕಟಸುಬ್ಬಯ್ಯ ಮಾತು ಆರಂಭಿಸಿ, ಪ್ರಶಸ್ತಿ ಸ್ವೀಕರಿಸಲು ವಯೋಮಾನದ ಕಾರಣದಿಂದ ವೈಯಕ್ತಿಕವಾಗಿ ಆಗಮಿಸಲು ಸಾಧ್ಯವಾಗದ ಅವರು, ವೇದಿಕೆಯ ಎದುರಿನ ಬೃಹತ್ ಪರದೆಯಲ್ಲಿ ಮಾತಿಗಾರಂಭಿಸಿದರು.‘ಪ್ರಶಸ್ತಿ ಆಯ್ಕೆಗೆ ರಚನೆ ಮಾಡಿದ್ದ ಸಮಿತಿ ನನ್ನನ್ನು ಆಯ್ಕೆ ಮಾಡಿದೆ. ಶ್ರೇಷ್ಠ ಕವಿ ಪಂಪನ ಸ್ಮರಣೆಯಲ್ಲಿ ನೀಡುವ ಪ್ರಶಸ್ತಿ ನನಗೆ, ಸಂದದ್ದು ತುಂಬಾ ಸಂತೋಷ ತಂದಿದೆ.ಪಂಪ ಎರಡು ಮಹತ್ವದ ಕೃತಿಗಳನ್ನು ರಚಿಸಿದ್ದಾನೆ. ಆತನ ಕೃತಿಗಳ ಓದು ನನ್ನ ವ್ಯಕ್ತಿತ್ವ ಬೆಳೆಸಿದೆ’ ಎಂದರು. ಪಂಪ ಪ್ರಶಸ್ತಿಯು 3 ಲಕ್ಷ ನಗದು, ಮತ್ತು 'ಸನ್ಮಾನ ಫಲಕ'ವನ್ನೊಳಗೊಂಡಿದೆ.
* [[ನಾಡೋಜ ಪ್ರಶಸ್ತಿ]] (೨೦೦೫)
* ೧೯೭೪ ರಲ್ಲಿ ಬೀದರನಲ್ಲಿ ನಡೆದ ಪ್ರಥಮ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
* ೨೦೧೧ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ೭೭ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
* ೨೦೧೪ನೇ ಸಾಲಿನ ಪಂಪ ಪ್ರಶಸ್ತಿ; (ದಿ. 7/02/2015 ರಂದು ಬನವಾಸಿಯ ಮಯೂರವರ್ಮ ವೇದಿಕೆಯಲ್ಲಿ ಅನುಪಸ್ಥಿತಿಯಲ್ಲಿ ಪ್ರದಾನ)
* ೨೦೧೭ನೇ ಸಾಲಿನ [[ಪದ್ಮಶ್ರೀ|ಪದ್ಮಶ್ರೀ ಪ್ರಶಸ್ತಿ]] <ref>[http://pib.nic.in/newsite/erelease.aspx?relid=157675 ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ, ಭಾರತ ಸರ್ಕಾರ] </ref>
* ೨೦೧೮ ರ ಕೇಂದ್ರ ಸಾಹಿತ್ಯ ಅಕಾಡೆಮಿಯ [https://www.prajavani.net/basha-samman-g-venkatasubbiah-597217.html ಭಾಷಾ ಸಮ್ಮಾನ್ ಪ್ರಶಸ್ತಿ]
==ನಿಧನ==
ಡಾ.ವೆಂಕಟಸುಬ್ಬಯ್ಯನವರು, ೧೮ ಏಪ್ರಿಲ್, ೨೦೨೧ ರಂದು ಮಧ್ಯರಾತ್ರಿ ತಮ್ಮ ಬೆಂಗಳೂರಿನ ನಿವಾಸದಲ್ಲಿ ನಿಧನಹೊಂದಿದರು. <ref> [https://www.prajavani.net/karnataka-news/veteran-kannada-writer-grammarian-padma-shri-g-venkatasubbiah-passed-away-in-bengaluru-823609.html ನಿಘಂಟು ತಜ್ಞ, ಭಾಷಾ ತಜ್ಞ, ಪ್ರೊ.ಜಿ.ವೆಂಕಟಸುಬ್ಬಯ್ಯನವರು ಇನ್ನಿಲ್ಲ. ಅವರು ಬೆಂಗಳೂರಿನ ನಿವಾಸದಲ್ಲಿ ೧೮, ಏಪ್ರಿಲ್, ೨೦೨೧ ರಂದು ಮಧ್ಯರಾತ್ರಿಯಲ್ಲಿ ನಿಧನರಾದರು. ಪ್ರಜಾವಾಣಿ, ೧೯, ಏಪ್ರಿಲ್,೨೦೨೧] </ref>
==ಉಲ್ಲೇಖಗಳು==
<References />
* [[ಮಲ್ಲಿಗೆ (ಮಾಸಪತ್ರಿಕೆ)]]ಯ ಸೆಪ್ಟೆಂಬರ್ ೨೦೦೫ರ ಸಂಚಿಕೆ.
==ನೋಡಿ==
[[ಸಿರಿಭೂವಲಯಸಾಗರರತ್ನಮಂಜೂಷ]]—ಪ್ರೊ.ಜಿ.ವೆಂಕಟಸುಬ್ಬಯ್ಯನವರ ಪತ್ರ
==ಬಾಹ್ಯ ಸಂಪರ್ಕಗಳು==
{{commons category|G. Venkatasubbiah}}
* [http://www.newindianexpress.com/cities/bangalore/Nadoja-is-honorary-doctorate/2013/11/20/article1900665.ece “Nadoja is a honorary doctorate in Kannada,”ಇಂಡಿಯನ್ ಎಕ್ಸ್ ಪ್ರೆಸ್]
[[ವರ್ಗ:ಸಾಹಿತಿಗಳು|ಜಿ.ವೆಂಕಟಸುಬ್ಬಯ್ಯ]]
[[ವರ್ಗ:ನಾಡೋಜ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು]]
[[ವರ್ಗ:೧೯೧೩ ಜನನ]]
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು]]All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?oldid=1031925.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|