Revision 284581 of "ಮಕ್ಕಳ ಕವನ" on knwiki

=== ಮಕ್ಕಳ ಸಾಹಿತ್ಯ ===
------------------
ಮಕ್ಕಳ ಕವನ ವನ್ನು  ಮಕ್ಕಳ ಕಥೆ ಮೊದಲಾದವುಗಳನ್ನು ಬರೆದು ಮಕ್ಕಳ ಸಾಹಿತ್ಯ ಬೆಳಸಿದವರಲ್ಲಿ ದೇವುಡು ನರಸಿಂಹ ಶಾಸ್ತ್ರಿ , ಜಿ.ಪಿ.ರಾಜರತ್ನಂ ಕೆ.ವಿ.ಪುಟ್ಟಪ್ಪ , ಹೊಹಿಸಳ, ಟಿ.ಎಂ.ಆರ್.ಸ್ವಾಮಿ, ಕಲಾಕುಮಾರ (ಡಾ.ದೊಡ್ಡೇರಿ ವೆಂಕಟಗಿರಿರಾವ್. ) ಸಿದ್ದಯ್ಯ ಪುರಾಣಿಕ ಮೊದಲಾದವರು ಪ್ರಮುಖರು. ಪುರಂದರದಾಸರು ಚಿಕ್ಕಮಕ್ಕಳಿಗಾಗಿ ಕೆಲವು ಸಣ್ಣ -ಸರಳ ಹಾಡುಗಳನ್ನು ರಚಿಸಿದ್ದಾರೆ. 
*ಇಲ್ಲಿ ಕೆಲವು ಜನಪ್ರಿಯ  ಮಕ್ಕಳ ಕವನಗಳನ್ನು  ಉದಾಹರಣೆಗಾಗಿ ಕೊಟ್ಟಿದೆ :
೧) ನಾಗರ ಹಾವೆ ! ವಿಷವಿರುವ ಭಯಂಕರ ಹಾವು ಏ ಹಾವೇ ; ಏನಿದು ಅದರಲ್ಲಿ ಸುಂದರ ಕೋಮಲ  ಹೂವು ಅರಳುವುದೇ! ಹೆಡೆ ಬಿಚ್ಚಿದಾಗ ಅದರೊಳಗೆ ಹೂವಿನ ಚಿತ್ರ. ಹೆಡೆಯೂ ಹೂವಿನಂತೆ ಬಿಚ್ಚಿ ಅರಳುವುದು. ರುದ್ರ ಸೌಂದರ್ಯ! ಹೊರಗೆ ಬಾ.  ಹೊಳಹಿನ ಹೊಂದಲೆ - ಹೊಳೆಯುವ ಹೊನ್ನಿನ ತಲೆ ಹಳದಿ ಬಣ್ಣದ ಬಂಗಾರದ ತಲೆ ಯನ್ನು ಕೊಳಲಿನ ನಾದಕ್ಕೆ ತೂಗು. ತಲೆಯಲ್ಲಿ ರತ್ನವಿದೆ ಎನ್ನುತ್ತಾರೆ -ನಿಜವೇ - ತೋರಿಸು ; ನಾಗರ ಹಾವು ಕೊಪ್ಪರಿಗೆ ಚಿನ್ನವನ್ನು ಕಾಯುತ್ತದೆ ಎಂದು ನಂಬುಗೆ  ಇದ್ದರೆ ನನಗೆ ಕೊಡು ;  ಮೈ ತಣ್ಣಗೆ ಇದ್ದರೂ  (ಮನದಲಿ ಬಿಸಿ ಹಗೆ ಸೇಡಿನ ಸಿಟ್ಟು) ನಾಗರ ಹಾವಿಗೆ ಸಿಟ್ಟು ಬಹಳ - ಆದ್ದರಿಂದ ಬೇಗ ಹೋಗು !

=== ನಾಗರ ಹಾವೆ! ===
-----------
* ನಾಗರ ಹಾವೆ ಹಾವೊಳು ಹೂವೆ 
* ಬಾಗಿಲ ಬಿಲದಲಿ ನಿನ್ನಯ ಠಾವೆ
* ಕೈಗಳ ಮುಗಿವೆ ಹಾಲನ್ನೀವೆ 
* ಬಾ ಬಾ ಬಾ , ಬಾ ಬಾ ಬಾ 		||೧ ||
-
* ಹಳದಿಯ ಹೆಡೆಯನು ಬಿಚ್ಚೋ ಬೇಗ, 
* ಕೊಳಲನ್ನೂದುವೆ ಲಾಲಿಸು ರಾಗ,
* ಹೊಳಹಿನ ಹೊಂದಲೆ ತೂಗೋ ನಾಗ, 
* ನೀ ನೀ ನೀ, ನೀ ನೀ ನೀ 		||೨||
-
* ಎಲೆ ನಾಗಣ್ಣ ಹೇಳೆಲೊ ನಿನ್ನ , 
* ತಲೆಯಲಿ ರನ್ನ ವಿಹುದನ್ನ , 
* ಕಾಯುತಲಿರುವೆ ಕೊಪ್ಪರಿಗೆಯ ಚಿನ್ನ, 
* ತಾ ತಾ ತಾ, ತಾ ತಾ ತಾ ,		||೩||
-
* ಬರಿಮೈ ತಣ್ಣಗೆ ಮನದಲಿ ಬಿಸಿ ಹಗೆ,
* ಎರಡೆಳೆ ನಾಲಗೆ ಇದ್ದರು ಸುಮ್ಮಗೆ, 
* ಎರಗುವೆ ನಿನಗೆ ಈಗಲೆ ಹೊರಗೆ , 
* ಪೋ ಪೋ ಪೋ, ಪೋ ಪೋ ಪೋ, ||೪||
* ರಚನೆ : [[ಜಿ.ಪಿ.ರಾಜರತ್ನಂ]]

=== ನಮ್ಮ ಮನೆಯ ಸಣ್ಣ ಪಾಪ ===
---------------------------
* ನಮ್ಮ ಮನೆಲೊಂದು ಪಾಪನಿರುಉದು 
* ಎತ್ತಿಕೊಳಲು ಹೋದರದಕೆ ಕೋಪ ಬರುವುದು ||೧||
-
* ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು 
* ಕಿರುಚಿಕೊಂಡು ತನ್ನ  ಮೈಯ್ಯ ಪರಚಿಕೊಳುವುದು ||೨||
-
* ಮೈಯ್ಯ ಪರಚಿಕೊಂಡು ಪಾಪ ಅತ್ತು ಕರೆವುದು,
* ಅಳಲು ಕಣ್ಣಿನಿಂದ ಮುತ್ತು ಸುರಿವುದು , ||೩||
-
* ಪಾಪ ಅತ್ತರಮ್ಮ ತಾನೂ ಅತ್ತು ಬಿಡವುದು 
* ಅಯ್ಯೋ ಪಾಪ ಎಂದುಕೊಂಡು ಮುತ್ತು ಕೊಡುವಳು || ೪ || 
-
* ಪಾಪ ಪಟ್ಟು ಹಿಡಿದ ಹಟವು ಸಾರ್ಥ ವಾಯಿತು 
* ಪರಚಿ ಪರಚಿ ಅಳುವುದೆಲ್ಲ ಅರ್ಥವಾಯಿತು  ||೫||
*ರಚನೆ: [[ಜಿ.ಪಿ.ರಾಜರತ್ನಂ]]

=== ಕಂದನು ಬಂದ ===
------------------
* ಕಂದನು ಬಂದುದು  ಎಲ್ಲಿಂದ ?
* ನೀಲಿಯ ಗಗನದ ಬಳಿಯಿಂದ ||೧||
-
* ಕಣ್ಣನು ಹೊಂದಿದನಾವಾಗ ?
* ಕಂದನ ಚಂದಿರ ಕಂಡಾಗ ||೨||
-
* ಕಣ್ಣನು ಕಳೆಯನು ಪಡೆದಿಹುದು
* ಅರಿವೇ ಮೋಹಿಸಿ ಕೊಟ್ಟುದುದು ||೩|| 
-
* ಕೆನ್ನೆಯುಕೆಂಪಾಗಿಹುದೇಕೆ ?
* ದೇವರ ಮುತ್ತನು ಪಡೆದುದಕೆ ||೪ ||
-
* ಯಾವಾಗಲು ನಗುವನದೇಕೆ ? 
* ನಾವರಿಯದುದನವನರಿತುದಕೆ
* (ನಾವು ಅರಿಯದುದನು ಅವನು ಅರತುದಕೆ  - ದೇವರನ್ನು ?)

*ರಚನೆ :ಕಲಾಕುಮಾರ ([[ಡಾ.ದೊಡ್ಡೇರಿ ವೆಂಕಟಗಿರಿರಾವ್]]).

=== ಬಣ್ಣದ ತಗಡಿನ ತುತ್ತೂರಿ ===
-------------------------
೩೧-೭-೨೦೧೨
 ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ ||೧||
ಸರಿಗಮ ಪದನಿಸ ಊದಿದನು
ಸನಿದಪ ಮಗರಿಸ ಊದಿದನು||೨|| 
ತನಗೇ ತುತ್ತುರಿ ಇದೆಯೆಂದ,
ಬೇರಾರಿಗು ಅದು ಇಲ್ಲೆಂದ, ||೩||
ಕಸ್ತುರಿ ನಡೆದನು ಬೀದಿಯಲಿ, 
ಜಂಬದ ಕೋಲಿಯ ರೀತಿಯಲಿ,||೪|| 
ತುತ್ತುರಿಯೂದುತ ಕೊಳದ ಬಳಿ, 
ನಡೆದನು ಕಸ್ತುರಿ ಸಂಜೆಯಲಿ. ||೫||
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ||೬||
ಸರಿಗಮ ಊದಲು ನೋಡಿದನು 
ಗಗಗಗ ಸದ್ದನು ಮಾಡಿದನು ||೭||
ಬಣ್ಣವು ನೀರಿನ ಪಾಲಾಯ್ತು 
ಬಣ್ಣದ ತುತ್ತುರಿ ಬೋಳಾಯ್ತು ||೮||
ಬಣ್ಣದ ತುತ್ತುರಿ ಹಾಳಾಯ್ತು
ಜಂಬದ ಕೋಳಿಗೆ ಗೋಳಾಯ್ತು||೯|| ಜಿ.ಪಿ ರಾಜರತ್ನಂ.
ಹತ್ತು ಹತ್ತು ಇಪ್ಪತ್ತು, 

ಹತ್ತು ಹತ್ತು ಇಪ್ಪತ್ತು, 
ತೋಟಕೆ ಹೋದನು ಸಂಪತ್ತು 
ಇಪ್ಪತ್ತು ಹತ್ತು ಮೂವತ್ತು 
ಕೈಯಲ್ಲೊಂದು ಕಲ್ಲಿತ್ತು
ಮೂವತ್ತು ಹತ್ತು ನಲವತ್ತು, 
ಎದುರಿಗೆ ಮಾವಿನ ಮರವಿತ್ತು. 
ನಲವತ್ತು ಹತ್ತು ಐವತ್ತು 
ಮಾವಿನ ಮರದಲಿ ಕಾಯಿತು
ಐವತ್ತು ಹತ್ತು ಅರವತ್ತು 
ಕಲ್ಲನುಬೀರಿದ ಸಂಪತ್ತು
ಅರವತ್ತು ಹತ್ತು ಎಪ್ಪತ್ತು
ಕಾಯಿಯು ತಪ ತಪನುದುರಿತ್ತು
ಎಪ್ಪತ್ತು ಹತ್ತು ಎಂಭತ್ತು 
ಮಾಲಿಯ ಕಂಡನು ಸಂಪತ್ತು. 
ಎಂಭತ್ತು ಹತ್ತು ತೊಂಭತ್ತು 
ಕಾಲುಗಳೆರಡೂ ಓಡಿತ್ತು
ತೊಂಭತ್ತು ಹತ್ತು ನೂರು
ಓಡುತ ಮನೆಂiiನು  ಸೇರು ಜಿ.ಪಿ ರಾಜರತ್ನಂ.
ಊಟದ ಆಟ
ಒಂದು ಎರಡು ಬಾಳೆಲೆ ಹರಡು ||
ಮೂರು ನಾಕು ಅನ್ನ ಹಾಕು ||
ಐದುಆರು ಬೇಳೆ ಸಾರು ||
ಏಳು ಎಂಟು ಪಲ್ಯಕೆ ದಂಟು ||
ಒಂಬತು ಹತ್ತು ಎಲೆ ಮುದಿರೆತ್ತು ||
ಒಂದರಿಂದ ಹತ್ತು, ಊಟದ ಆಟವು ಮುಗಿದಿತ್ತು || ಜಿ.ಪಿ ರಾಜರತ್ನಂ.||
ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ









=== ಆಧಾರ : === 
-------------
ಹಿಂದಿನ ಮೈಸೂರು ಸರ್ಕಾರದ ಪ್ರಾಥಮಿಕ ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ.
*[[ಕನ್ನಡ ಸಾಹಿತ್ಯ ಪ್ರಕಾರಗಳು]]

ವರ್ಗ : [[ಕನ್ನಡ ಸಾಹಿತ್ಯ]]