Revision 316294 of "ಲಿಂಗಾಯತ" on knwiki

'''ಲಿಂಗಾಯತ''' ಧರ್ಮವು ಭಾರತದ ಒಂದು ಸ್ವತಂತ್ರ ಧರ್ಮವಾಗಿದೆ.ಗುರು ಬಸವಣ್ಣನವರು ಸ್ಥಾಪಿಸಿದ, ಈ ಧರ್ಮವು ಭಾರತದ ಹಲವು ಪ್ರಾಂತಗಳಲ್ಲಿ ಬೆಳದಿದೆ. ಈ ಧರ್ಮವನ್ನು ಷಟಸ್ಥಲ ಸಿದ್ಧಾಂತ ದರ್ಶನವೆಂದು ಕರೆಯುವರು. ಲಿಂಗಾಯತ ಮತ್ತು ವೀರಶೈವ ಬೇರೆ ಬೇರೆ. ಲಿಂಗಾಯತವು ವಿಶ್ವಗುರು ಬಸವಣ್ಣನವರಿಂದ ಸ್ಥಾಪಿತವಾದ ಸ್ವತಂತ್ರ ಅವೈದಿಕ ಧರ್ಮ, ಅಹಿಂದು ಧರ್ಮ.

== ಇತಿಹಾಸ ==
ಗುರು ಬಸವಣ್ಣನವರೆ ಲಿಂಗಾಯತ ಧರ್ಮ ಸ್ಥಾಪಕರು ಎಂದು ಹೇಳುವ ವಚನಗಳು. ಈ ವಚನಗಳು ೧೨ನೇ ಶತಮಾನದಲ್ಲಿ ರಚನೆಯಾಗಿದ್ದು ನಂಬಲರ್ಹವಾಗಿವೆ.<br />
 
ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು<br />
'''ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು''' <br />
ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು<br />
ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು<br />
ಇರೇಳು ಲೋಕವಾಯಿತ್ತು ಬಸವಣ್ಣನಿಂದ ಕಲಿದೇವಯ್ಯಾ.<br />

ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ,<br />
ಎತ್ತಿ ನೋಡಿದಡೆ ಲಿಂಗ ವೆಂಬ ಗೊಂಚಲು,<br />
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ,<br />
ಆಯತವು ಬಸವಣ್ಣನಿಂದ, ಸ್ವಾಯತವು ಬಸವಣ್ಣನಿಂದ ಸನ್ನಿಹಿತವು ಬಸವಣ್ಣನಿಂದ,<br />
ಗುರು ಬಸವಣ್ಣನಿಂದ, '''ಲಿಂಗ ಬಸವಣ್ಣನಿಂದ''', ಜಂಗಮ ಬಸವಣ್ಣನಿಂದ,<br />
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ<br />
ಅತ್ತ ಬಲ್ಲಡೆ ನೀವು ಕೇಳಿರೇ, ಇತ್ತ ಬಲ್ಲಡೆ ನೀವು ಕೇಳಿರೇ,<br />
ಬಸವ ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ ಕಲಿದೇವರದೇವಾ.<br />
- ಮಡಿವಾಳ ಮಾಚಿದೇವ<ref>ಸಮಗ್ರ ವಚನ ಸಾಹಿತ್ಯ ಸಂಪುಟ-೮ ವಚನ ಸಂಖ್ಯೆ ೫೨೬, ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ ಬೆಂಗಳೂರು.</ref> 

ಆದಿ ಬಸವಣ್ಣ ಅನಾದಿ ಲಿಂಗವೆಂಬರು, ಹುಸಿ ಹುಸಿ ಈ ನುಡಿಯ ಕೇಳಲಾಗದು, <br />
ಆದಿ ಲಿಂಗ, ಅನಾದಿ ಬಸವಣ್ಣನು! '''ಲಿಂಗವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು''',<br />
ಜಂಗಮವು ಬಸವಣ್ಣನ ಉದರದಲ್ಲಿ ಹುಟ್ಟಿತ್ತು, ಪ್ರಸಾದವು ಬಸವಣ್ಣನನುಕರಿಸಲಾಯಿತ್ತು,<br />
ಇಂತೀ ತ್ರಿವಿಧಕ್ಕೆ ಬಸವಣ್ಣನೇ ಕಾರಣನೆಂದರಿದೆನಯ್ಯಾ ಕೂಡಲಚೆನ್ನ ಸಂಗಮದೇವಾ.<br />
- ಚೆನ್ನ ಬಸವಣ್ಣ <ref>ಸಮಗ್ರ ವಚನ ಸಾಹಿತ್ಯ ಸಂಪುಟ-೩ ವಚನ ಸಂಖ್ಯೆ ೫, ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ ಬೆಂಗಳೂರು.</ref>
<br />

ಎನ್ನ ತನುವೆ ಬಸವಣ್ಣನು,<br />
ಎನ್ನ ಮನವ ಚೆನ್ನಬಸವಣ್ಣನು,<br />
ಎನ್ನ ಪ್ರಾಣವೇ ಪ್ರಭುದೇವರು,<br />
ಎನ್ನ ಸರ್ವಕರಣಂಗಳೆಲ್ಲ ಅಸಂಖ್ಯಾತ ಮಹಗಣಂಗಳಾಗಿರ್ಪರಾಗಿ,<br />
ಅಖಂಡೇಶ್ವರಾ ನಿಮ್ಮೊಳಗೆ ನಿಜವು ಸಾಧ್ಯವಾಯಿತ್ತಯ್ಯ ಇಂದೆನೆಗೆ.<br />

'''ಬಸವಣ್ಣನೆ ಗುರುವೆನಗೆ''', <br />
ಬಸವಣ್ಣನೆ ಲಿಂಗವೆನಗೆ, <br />
ಬಸವಣ್ಣನೆ ಜಂಗಮವೆನಗೆ<br />
ಬಸವಣ್ಣನೆ ಪಾದೋದಕವೆನಗೆ, <br />
ಬಸವಣ್ಣನೆ ಪ್ರಸಾದವೆನಗೆ, <br />
ಬಸವಣ್ಣನೆ ವಿಭೂತಿಯೆನಗೆ,<br />
ಬಸವಣ್ಣನೆ ರುದ್ರಾಕ್ಷಿಯೆನಗೆ, <br />
ಬಸವಣ್ಣನೆ ಮೂಲ ಮಂತ್ರವೆನಗೆ, <br />
ಬಸವಣ್ಣನೆ ಅಷ್ಟಾವರಣವೆನಗೆ, <br />
ಬಸವಣ್ಣನೆ ಪಂಚಾಚಾರವೆನಗೆ, <br />
ಬಸವಣ್ಣನೆ ಷಟ್ ಸ್ಥಲಬ್ರಹ್ಮವೆನಗೆ, <br />
ಬಸವಣ್ಣನೆ ಸರ್ವಾಚಾರ ಸಂಪತ್ತಾದನಾಗಿ,<br />
ಬಸವಣ್ಣನ ಹಾಸಿಕೊಂಡು,<br />
ಬಸವಣ್ಣನ ಹೊದ್ದುಕೊಂಡು,<br />
ಬಸವಣ್ಣನ ತೊಂತಿಕೊಂಡು,<br />
ಬಸವಣ್ಣನ ಧರಿಸಿಕೊಂಡು,<br />
ಬಸವಣ್ಣನ ಚಿದ್ ಗರ್ಭದೊಳಗೆ ಕುಳ್ಳಿರ್ದು <br />
ನಾನು ಬಸವ ಬಸವ ಬಸವಾ ಎನುತಿರ್ದೆನಯ್ಯ ಅಖಂಡೇಶ್ವರಾ.<br />
<br />

ಬಸವನ ನಾಮವು ಕಾಮಧೇನು ಕಾಣಿರೋ,<br />
ಬಸವನ ನಾಮವು ಕಲ್ಪವೃಕ್ಷ ಕಾಣಿರೋ,<br />
ಬಸವನ ನಾಮವು ಚಿಂತಾಮಣಿ ಕಾಣಿರೋ,<br />
ಬಸವನ ನಾಮವು ಪರುಷದ ಖಣಿ ಕಾಣಿರೋ,<br />
ಬಸವನ ನಾಮವು ಸಂಜೀವನ ಮೂಲಿಕೆ ಕಾಣಿರೋ,<br />
ಇಂತಪ್ಪ ಬಸವ ನಾಮಾಮೃತವು ಎನ್ನ ಜಿಹ್ವೆಯ ತುಂಬಿ ಹೊರಸೂಸಿ ಮನವ ತುಂಬಿತ್ತು,<br />
ಆ ಮನವ ತುಂಬಿ ಹೊರಸೂಸಿ ಭಾವವ ತುಂಬಿತ್ತು,<br />
ಆ ಭಾವವ ತುಂಬಿ ಹೊರಸೂಸಿ ಸಕಲ ಕರಣೇಂದ್ರಿಯಂಗಳ ತುಂಬಿತ್ತು,<br />
ಆ ಸಕಲ ಕರಣೇಂದ್ರಿಯಂಗಳ ತುಂಬಿ ಹೊರಸೂಸಿ ಸರ್ವಾಂಗದ ರೋಮ ಕುಳಿಗಳನೆಲ್ಲ ವೇಧಿಸಿತ್ತಾಗಿ,<br />
ನಾನು ಬಸವಾಕ್ಷರವೆಂಬ ಹಡಗನೇರಿ ಬಸವ ಬಸವಾ ಎಂದು ಭವ ಸಾಗರವ ದಾಂಟಿದೆನಯ್ಯ ಅಖಂಡೇಶ್ವರಾ.<br />

ಇದಲ್ಲೆದೆ  ಬಸವಣ್ಣನವರ ಕಾಲಾನಂತರದಲ್ಲಿ ಈ ಕೆಳಗಿನವರು ಲಿಂಗಾಯತ ಧರ್ಮ ಸ್ಥಾಪಕ ಬಸವಣ್ಣನವರು ಎಂದು ತಿಳಿಸಿದ್ದಾರೆ.<br />

* ಹಂಪೆಯ ಕವಿ ಹರಿಹರ (ಕ್ರಿ. ಶ.೧೧೯೫)
* ಪಾಲ್ಕುರಿಕೆಯ ಸೋಮನಾಥ (ಕ್ರಿ. ಶ. ಸುಮಾರು ೧೨೦೦ ರಲ್ಲಿ ತೆಲುಗಿನಲ್ಲಿ)
* ಚಾಮರಸನ ಪ್ರಭುಲಿಂಗಲೀಲೆ (ಕ್ರಿ. ಶ. ೧೪೦೦ )
* ಮಗ್ಗೆಯ ಮಾಯಿದೇವಪ್ರಭು (ಕ್ರಿ. ಶ. ೧೪೩೦)
* ಚತುರ್ಮುಖ ಬೊಮ್ಮರಸ (ಕ್ರಿ. ಶ.೧೫೦೦)

ಹಿರೆಮಲ್ಲೂರ ಈಶ್ವರನ<ref>[1] Page no 161, **165of Lingayatha Dharma : Ondu Adhyayana,by Hiremallur K. Ishwaran: Published by Priyadarshini Prakashana, Bangalore.</ref> ಅವರು ಲಿಂಗಾಯತವು ಗುರು ಬಸವಣ್ಣನವರಿಗಿಂತ ಮುಂಚೆ ಇಲ್ಲವೆಂದು ಸ್ಪಷ್ಟವಾಗಿ ಅವರ "ಲಿಂಗಾಯತ ಒಂದು ಅಧ್ಯಯನ’ ಪುಸ್ತಕದಲ್ಲಿ ತಿಳಿಸಿದ್ದಾರೆ.<br />
ಪ್ರೋ ವಿ.ವಿ. ಸಂಗಮದ ಅವರು "ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಕರು’ <ref>[2] Page no 1 of Basavannanavru Lingayath Dharma Samsthapakaru (Basavanna the founder of Lingayath religion). By: Prof: V. V. Sangamad.Pub: Basava Balaga, Akkamahadevi Road, Davanagere-3</ref> ಎಂಬ ಪುಸ್ತಕವನ್ನು ಬರೆದಿದ್ದಾರೆ.

== ಕಾಯಕ ಸಿದ್ಧಾಂತ ==

"ದೇವ ಸಹಿತ ಮನೆಗೆ ಬಂದಡೆ <br />
ಕಾಯಕವಾವುದೆಂದು ಬೆಸಗೊಂಡಡೆ<br />
ನಿಮ್ಮಾಣೆ, ನಿಮ್ಮ ಪುರಾತರಾಣೆ! ತಲೆದಂಡ! ತಲೆದಂಡ! ತಲೆದಂಡ!<br />
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಿಸಿದಡೆ<br />
ನಿಮ್ಮ ರಾಣಿವಾಸದಾಣೆ."<br />

ಹೀಗೆ ಬಸವಣ್ಣನವರು ಭಕ್ತರಲ್ಲಿ ಸರ್ವಸಮಾನತೆಯನ್ನು ಕಾಣುತ್ತಾರೆ. ಶರಣರ ದೃಷ್ಟಿಯಲ್ಲಿ ಯಾವ ಕಾಯಕವೂ ಚಿಕ್ಕದಲ್ಲ ಅಥವಾ ದೊಡ್ಡದಲ್ಲ.

"ಮನಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ<br />
ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ<br />
ಸದ್ಭಕ್ತಂಗೆ ಎತ್ತ ನೋಡಿದತ್ತ ಲಕ್ಷ್ಮಿ ತಾನಾಗಿಪ್ಪಳು<br />
ಮಾರಯ್ಯಪ್ರಿಯ ಅಮರೇಶ್ವರ ಲಿಂಗದ ಸೇವೆಯುಳ್ಳನ್ನಕ್ಕರ"

ಎಂದು ಆಯ್ದಕ್ಕಿ ಕಾಯಕದ ಮಹತ್ವವನ್ನು ವ್ಯಕ್ತಪಡಿಸುತ್ತಾಳೆ.

"ಮನೆ ನೋಡಾ ಬಡವರು, ಮನ ನೋಡಾ ಘನ <br />
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.<br />
ಪಸರಕ್ಕನುವಿಲ್ಲ; ಬಂದ ತತ್ಕಾಲಕ್ಕೆ ಉಂಟು.<br />
ಕೂಡಲಸಂಗನ ಶರಣರು ಸ್ವತಂತ್ರ ಧೀರರು."<br />

ಎಂದು ಬಸವಣ್ಣನವರು ಕಾಯಕಜೀವಿಗಳ ವ್ಯಕ್ತಿತ್ವದ ಕುರಿತು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಅವರು ಘನಮನದವರೂ ಪರಿಶುದ್ಧರೂ ಸ್ವತಂತ್ರ ಧೀರರೂ ಆಗಿದ್ದಾರೆ. 

"ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ <br />
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು<br />
ಜಂಗಮವಾದರೂ ಕಾಯಕದಿಂದಲೇ ವೇಷಪಾಶ ಹರಿವುದು<br />
ಇದು ಚೆನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗದ ಅರಿವು" <br /><br />
ಎಂದು ನುಲಿಯ ಚಂದಯ್ಯನವರು ಕಾಯಕದ ಮಹತ್ವವನ್ನು ಸಾರಿದ್ದಾರೆ. ಗುರು-ಲಿಂಗ-ಜಂಗಮಕ್ಕೆ ಕಾಯಕವೇ ಆಧಾರವಾಗಿದೆ ಎಂದು ಮನಂಬುಗುವಂತೆ ಹೇಳಿದ್ದಾರೆ.<br /><br />
"ಕಾಯಕದಲ್ಲಿ ನಿರತನಾದಡೆ<br />
ಗುರುದರ್ಶನವಾದಡೂ ಮರೆಯಬೇಕು<br />
ಲಿಂಗಪೂಜೆಯಾದಡೂ ಮರೆಯಬೇಕು<br />
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು<br />
ಕಾಯಕವೇ ಕೈಲಾಸವಾದ ಕಾರಣ<br />
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು."<br />
ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ. 

"ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ<br />
ಸತ್ಯಶುದ್ಧವಿಲ್ಲದುದು ಕಾಯಕವಲ್ಲ<br />
ಆಸೆಯೆಂಬುದು ಭವದ ಬೀಜ<br />
ನಿರಾಸೆಯೆಂಬುದು ನಿತ್ಯಮುಕ್ತಿ<br />
ಉರಿಲಿಂಗಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ." ಎಂದು ಉರಿಲಿಂಗಪೆದ್ದಿಗಳ ಮುಣ್ಯಸ್ತ್ರೀ ಕಾಳವ್ವೆ ಹೇಳುತ್ತಾಳೆ.<br />
ಕಾಯಕದಲ್ಲಿ ಮುಕ್ತಿ ಕಾಣುವ ಪರಿ ಇದು. ಒಬ್ಬ ದಲಿತ ಮಹಿಳೆ ಶರಣಸಂಕುಲದೊಳಗೆ ಬಂದು ಇಷ್ಟೊಂದು ಮಹತ್ತರವಾದ ವಿಚಾರವನ್ನೊಳಗೊಂಡ ವಚನರಚನೆ ಮಾಡಿದ್ದಾಳೆಂದರೆ ಬಸವಣ್ಣನವರು ಜಗತ್ತಿನಲ್ಲಿ ಮೊದಲಬಾರಿಗೆ ಯಾವರೀತಿ ವಯಸ್ಕರ ಶಿಕ್ಷಣದ ವ್ಯವಸ್ಥೆ ಮಾಡಿರಬಹುದು ಎಂಬುದರ ಕುರಿತು ಸಂಶೋಧನೆಯಾಗಬೇಕಿದೆ. ಶರಣರ ವಚನಗಳು ಮತ್ತು ತತ್ತ್ವ ಕೂಡ ಕಾಯಕದ ಉತ್ಪತ್ತಿಯಾಗಿವೆ ಎಂಬುದನ್ನು ಮರೆಯಬಾರದು. ವಚನಗಳು ಅನನ್ಯವಾಗಿರುವುದು ಇದೇ ಕಾರಣದಿಂದ. ಅನೇಕ ವಚನಕಾರರು ತಮ್ಮ ಕಾಯಕಗಳ ಅನುಭದ ಮೂಲಕವೇ ಅನುಭಾವಿಯಾಗಿದ್ದಾರೆ. ಅವರ ವಚನಗಳಲ್ಲಿನ ಪ್ರತಿಮೆ, ಪ್ರತೀಕ ಮತ್ತು ಸಂಕೇತಗಳು ಅವರವರ ಕಾಯಕಗಳ ಅನುಭವದ ಮೂಲಕವೇ ಸೃಷ್ಟಿಯಾಗಿವೆ.

== ನಂಬಿಕೆಗಳು ==
ಎನಗಿಂತ ಕಿರಿಯರಿಲ್ಲ ಎಂಬ ಸವಿನಯದ ಮಾತನಾಡುತ್ತಾ, ಕಾಸಿ ಕಮ್ಮಾರನಾದ / ಬೀಸಿ ಮಡಿವಾಳನಾದ / ಹಾಸನಿಕ್ಕಿ ಸಾಲಿಗನಾದ / ವೇದವನೋದಿ ಹಾರುವನಾದ / ಎಂದು ಜಾತಿಯ ಬಣ್ಣವನ್ನು ಬಯಲು ಮಾಡಿದ ಬಸವಣ್ಣ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ;<br />

ನೆಲವೊಂದೆ : ಹೊಲಗೇರಿ ಶಿವಾಲಯಕ್ಕೆ<br />
ಜಲವೊಂದೆ : ಶೌಚಾಚಮನಕ್ಕೆ<br />
ಕುಲವೊಂದೆ : ತನ್ನ ತಾನರಿದವಂಗೆ<br />
ಫಲವೊಂದೆ : ಷಡುದರುಶನ ಮುಕ್ತಿಗೆ<br />
ನಿಲವೊಂದೆ : ಕೂಡಲ ಸಂಗಮದೇವ ನಿಮ್ಮನರಿವವಂಗೆ<br />

ಎಂದು ಸಾರಿದ ಬಸವಣ್ಣನ ಈ ವಚನ ಇಂದಿಗೂ ಪ್ರಸ್ತುತವಾಗಿದೆ. ಲಿಂಗಾಯತವು ದೇಗುಲ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿರಾಕರಿಸಿದೆ ಇದನ್ನು ಧರ್ಮ ಗುರು ಬಸವಣ್ಣನವರ ವಚನದಲ್ಲಿ ಕಾಣಬಹುದು.

ಉಳ್ಳವರು ಶಿವಾಲಯವ ಮಾಡುವರು<br />
ನಾನೇನ ಮಾಡುವೆ ಬಡವನಯ್ಯಾ.<br />
ಎನ್ನ ಕಾಲೇ ಕಂಭ, ದೇಹವೇ ದೇಗುಲ,<br />
ಶಿರ ಹೊನ್ನ ಕಳಶವಯ್ಯಾ.<br />
ಕೂಡಲ ಸಂಗಮದೇವಾ, ಕೇಳಯ್ಯಾ<br />
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ.<br />


== ಧರ್ಮಕ್ಷೇತ್ರಗಳು ==
[[ಕೂಡಲ_ಸಂಗಮ]], [[ಬಸವಕಲ್ಯಾಣ]], [[ಶ್ರೀಶೈಲ]], [[ಬಸವನ_ಬಾಗೇವಾಡಿ]],[[ಇಂಗಳೇಶ್ವರ]],
, [[ಎಡೆಯೂರು_ಸಿದ್ಧಲಿಂಗೇಶ್ವರ]], [[ಸಿದ್ದಗಂಗಾ]],ಮತ್ತು [[ಸೊಲ್ಲಾಪುರ]].

== ಗ್ರಂಥ ಋಣ ==
<references> ಸಮಗ್ರ ವಚನ ಸಾಹಿತ್ಯ ಸಂಪುಟ-೮ ವಚನ ಸಂಖ್ಯೆ ೫೨೬, ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರಕಾರ ಬೆಂಗಳೂರು.</references>
<references>[1] Page no 161, **165of Lingayatha Dharma : Ondu Adhyayana,by Hiremallur K. Ishwaran: Published by Priyadarshini Prakashana, Bangalore. </references>
<references> [2] Page no 1 of Basavannanavru Lingayath Dharma Samsthapakaru (Basavanna the founder of Lingayath religion). By: Prof: V. V. Sangamad.Pub: Basava Balaga, Akkamahadevi Road, Davanagere-3</references>

== ಬಾಹ್ಯ ಸಂಪರ್ಕಗಳು ==

* '''[http://www.lingayatreligion.com ಲಿಂಗಾಯತ ಧರ್ಮ] '''
* [http://www.vishwagurubasavanna.com/ ವಿಶ್ವಗುರು ಬಸವಣ್ಣ ] ವಿಶ್ವಗುರು ಬಸವಣ್ಣನವರ ಸಂಕ್ಷೀಪ್ತ ಜೀವನ ಚರಿತ್ರೆ
* [http://www.vicharamantapa.net ವಿಚಾರಮಂಟಪ.ನೆಟ್] ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಸರ್ವಜ್ಞರ ವಚನಗಳು
* [http://www.lingayathism.net/ ಲಿಂಗಾಯತ ]

[[ವರ್ಗ:ಲಿಂಗಾಯತ]]