Difference between revisions 284581 and 284582 on knwiki

=== ಮಕ್ಕಳ ಸಾಹಿತ್ಯ ===
------------------
ಮಕ್ಕಳ ಕವನ ವನ್ನು  ಮಕ್ಕಳ ಕಥೆ ಮೊದಲಾದವುಗಳನ್ನು ಬರೆದು ಮಕ್ಕಳ ಸಾಹಿತ್ಯ ಬೆಳಸಿದವರಲ್ಲಿ ದೇವುಡು ನರಸಿಂಹ ಶಾಸ್ತ್ರಿ , ಜಿ.ಪಿ.ರಾಜರತ್ನಂ ಕೆ.ವಿ.ಪುಟ್ಟಪ್ಪ , ಹೊಹಿಸಳ, ಟಿ.ಎಂ.ಆರ್.ಸ್ವಾಮಿ, ಕಲಾಕುಮಾರ (ಡಾ.ದೊಡ್ಡೇರಿ ವೆಂಕಟಗಿರಿರಾವ್. ) ಸಿದ್ದಯ್ಯ ಪುರಾಣಿಕ ಮೊದಲಾದವರು ಪ್ರಮುಖರು. ಪುರಂದರದಾಸರು ಚಿಕ್ಕಮಕ್ಕಳಿಗಾಗಿ ಕೆಲವು ಸಣ್ಣ -ಸರಳ ಹಾಡುಗಳನ್ನು ರಚಿಸಿದ್ದಾರೆ. 
*ಇಲ್ಲಿ ಕೆಲವು ಜನಪ್ರಿಯ  ಮಕ್ಕಳ ಕವನಗಳನ್ನು  ಉದಾಹರಣೆಗಾಗಿ ಕೊಟ್ಟಿದೆ :
(contracted; show full)* ನಾವರಿಯದುದನವನರಿತುದಕೆ
* (ನಾವು ಅರಿಯದುದನು ಅವನು ಅರತುದಕೆ  - ದೇವರನ್ನು ?)

*ರಚನೆ :ಕಲಾಕುಮಾರ ([[ಡಾ.ದೊಡ್ಡೇರಿ ವೆಂಕಟಗಿರಿರಾವ್]]).

=== ಬಣ್ಣದ ತಗಡಿನ ತುತ್ತೂರಿ ===
-------------------------

*೩೧-೭-೨೦೧೨
* ಬಣ್ಣದ ತಗಡಿನ ತುತ್ತೂರಿ
* ಕಾಸಿಗೆ ಕೊಂಡನು ಕಸ್ತೂರಿ ||೧||
* ಸರಿಗಮ ಪದನಿಸ ಊದಿದನು
* ಸನಿದಪ ಮಗರಿಸ ಊದಿದನು||೨|| 
* ತನಗೇ ತುತ್ತುರಿ ಇದೆಯೆಂದ,
* ಬೇರಾರಿಗು ಅದು ಇಲ್ಲೆಂದ, ||೩||
* ಕಸ್ತುರಿ ನಡೆದನು ಬೀದಿಯಲಿ, 
* ಜಂಬದ ಕೋಲಿಯ ರೀತಿಯಲಿ,||೪|| 
* ತುತ್ತುರಿಯೂದುತ ಕೊಳದ ಬಳಿ, 
* ನಡೆದನು ಕಸ್ತುರಿ ಸಂಜೆಯಲಿ. ||೫||
* ಜಾರಿತು ನೀರಿಗೆ ತುತ್ತೂರಿ
* ಗಂಟಲು ಕಟ್ಟಿತು ನೀರೂರಿ||೬||
* ಸರಿಗಮ ಊದಲು ನೋಡಿದನು 
* ಗಗಗಗ ಸದ್ದನು ಮಾಡಿದನು ||೭||
* ಬಣ್ಣವು ನೀರಿನ ಪಾಲಾಯ್ತು 
* ಬಣ್ಣದ ತುತ್ತುರಿ ಬೋಳಾಯ್ತು ||೮||
* ಬಣ್ಣದ ತುತ್ತುರಿ ಹಾಳಾಯ್ತು
* ಜಂಬದ ಕೋಳಿಗೆ ಗೋಳಾಯ್ತು||೯|| ಜಿ.ಪಿ ರಾಜರತ್ನಂ.

=== ಹತ್ತು ಹತ್ತು ಇಪ್ಪತ್ತು, 



=== 
------------------------
* ಹತ್ತು ಹತ್ತು ಇಪ್ಪತ್ತು, 
* ತೋಟಕೆ ಹೋದನು ಸಂಪತ್ತು 
* ಇಪ್ಪತ್ತು ಹತ್ತು ಮೂವತ್ತು 
* ಕೈಯಲ್ಲೊಂದು ಕಲ್ಲಿತ್ತು
* ಮೂವತ್ತು ಹತ್ತು ನಲವತ್ತು, 
* ಎದುರಿಗೆ ಮಾವಿನ ಮರವಿತ್ತು. 
* ನಲವತ್ತು ಹತ್ತು ಐವತ್ತು 
* ಮಾವಿನ ಮರದಲಿ ಕಾಯಿತು
* ಐವತ್ತು ಹತ್ತು ಅರವತ್ತು 
* ಕಲ್ಲನುಬೀರಿದ ಸಂಪತ್ತು
* ಅರವತ್ತು ಹತ್ತು ಎಪ್ಪತ್ತು
* ಕಾಯಿಯು ತಪ ತಪನುದುರಿತ್ತು
* ಎಪ್ಪತ್ತು ಹತ್ತು ಎಂಭತ್ತು 
* ಮಾಲಿಯ ಕಂಡನು ಸಂಪತ್ತು. 
* ಎಂಭತ್ತು ಹತ್ತು ತೊಂಭತ್ತು 
* ಕಾಲುಗಳೆರಡೂ ಓಡಿತ್ತು
* ತೊಂಭತ್ತು ಹತ್ತು ನೂರು
* ಓಡುತ ಮನೆಂiiನು  ಸೇರು  ||  ಜಿ.ಪಿ ರಾಜರತ್ನಂ.

=== ಊಟದ ಆಟ

 ===
--------------------------
* ಒಂದು ಎರಡು ಬಾಳೆಲೆ ಹರಡು ||
* ಮೂರು ನಾಕು ಅನ್ನ ಹಾಕು ||
* ಐದುಆರು ಬೇಳೆ ಸಾರು ||
* ಏಳು ಎಂಟು ಪಲ್ಯಕೆ ದಂಟು ||
* ಒಂಬತು ಹತ್ತು ಎಲೆ ಮುದಿರೆತ್ತು ||
* ಒಂದರಿಂದ ಹತ್ತು, ಊಟದ ಆಟವು ಮುಗಿದಿತ್ತು || ಜಿ.ಪಿ ರಾಜರತ್ನಂ.||
-
* ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ

















=== ಆಧಾರ : === 
-------------
ಹಿಂದಿನ ಮೈಸೂರು ಸರ್ಕಾರದ ಪ್ರಾಥಮಿಕ ಪಠ್ಯ ಪುಸ್ತಕ ಹಿಗ್ಗಿನ ಬುಗ್ಗೆ ಮಕ್ಕಳ ಕವನ ಸಂಗ್ರಹ -ಕಾಪಿರೈಟಿನಿಂದ ಮುಕ್ತವಾಗಿದೆ.
*[[ಕನ್ನಡ ಸಾಹಿತ್ಯ ಪ್ರಕಾರಗಳು]]

ವರ್ಗ : [[ಕನ್ನಡ ಸಾಹಿತ್ಯ]]