Difference between revisions 289909 and 289910 on knwiki{{merge from|ಪುಟ}} <big>'''ಈಶೋಪನಿಷತ್ತು'''</big> ((ಕನ್ನಡ ಭಾವಾನುವಾದ ಮತ್ತು ವ್ಯಾಖ್ಯಾನ : [[ಬಿ.ಎಸ್.ಚಂದ್ರಶೇಖರ]] [[ಸಾಗರ]] ; ೨೨-೯-೨೦೦೯/2-1-2012) ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್ತುಗಳು]], ವೇದದ ಅಂಗಗಳಾದ [[ಬ್ರಾಹ್ಮಣ]],ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ [[ಈಶಾವಾಸ್ಯೋಪನಿಷತ್ತು]] ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು. ಅದಕ್ಕೆ ಈಶೋಪನಿಷತ್ತು ಎಂಬ ಹೆಸರೂ ಇದೆ. ಇದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ. [[ಭಗವದ್ಗೀತೆ]] ಇದರ ವಿಸ್ತಾರ ರೂಪ ಎಂಬ ಅಭಿಪ್ರಾಯವಿದೆ. (contracted; show full) ತೇನ ತ್ಯಕ್ತೇನ ಭುಂಜೀಥಾಃ| ಮಾ ಗೃಧಃ ಕಸ್ಯಸ್ವಿದ್ಧನಂ || '''ಕನ್ನಡ''' * ಓಂ ಹರಿಗೆ ನಮವು | * ಈಶ ಭಾವದಿಂ ಮುಚ್ಚು ಮನದಿಂದೆಲ್ಲವನು| * ಕಣವಿರಲಿ, ಜಗವಿರಲಿ ; ಅದರಿಂದೆ - | * ಕೊಟ್ಟು ತಾನುಣಬೇಕು, ಅತಿಯಾಸೆ ಒಳಿತಲ್ಲ, * ಬಿಟ್ಟು ಹೋಗುವ ಸಂಪದವು ನಮದಲ್ಲ || *(ಈಶ ಭಾವದಿಂದ ಮುಚ್ಚು ಮನದಿಂದ + ಎಲ್ಲವನು, ಕಣವು +ಇರಲಿ- ಕಣವೇ ಆಗಿರಲಿ; ಜಗವು+ಇರಲಿ - ಜಗವೇ ಆಗಿರಲಿ; ಅದರಿಂದೆ- ಆದ್ದರಿಂದ ಕೊಟ್ಟು ತಾನು ಉಣ್ಣಬೇಕು; ಆತಿ ಆಸೆ ಒಳಿತು ಅಲ್ಲ; ಬಿಟ್ಟು ಹೋಗುವ ಸಂಪತ್ತು ನಮ್ಮದು ಅಲ್ಲ.) *ಸರ್ವಾಂತರ್ಯಾಮಿಯಾದ ಜಗದೊಡೆಯ ಭಗವಂತನ ನೆನಪು ಸದಾ ಇರಬೇಕು. (ಈಶ ಭಾವದಿಂದ ಈ ಜಗತ್ತನ್ನು ಮುಚ್ಚಬೇಕು ಎಂಬುದು ಶ್ರೀ ಶಂಕರರ ಅರ್ಥ: *ಈ ಜಗತ್ತಿನ ಕಣದಿಂದ ಹಿಡಿದು ಎಲ್ಲದರಲ್ಲೂ ಪರಮಾತ್ಮನು ಆವರಿಸಿದ್ದಾನೆ - ಆವಾಸವಾಗಿದ್ದಾನೆ ಎಂದು ಕೆಲವರ ಅರ್ಥ) *(ಜಗದೊಡೆಯ ಈಶನಿಗೆ ಈ ಜಗತ್ತು ಆಶ್ರಯ ಸ್ಥಾನವಾಗಿದೆ ಎಂಬುದು ತಾರ್ಕಿಕ ದೃಷ್ಠಿಯಿಂದ ಸರಿಯಲ್ಲವೆಂದು ಶ್ರೀ ಶಂಕರರು ಭಾವಿಸಿರಬಹುದು. ಏಕೆಂದರೆ ಈಶನೇ ಜಗತ್ತಿಗೆ ಆಶ್ರಯನು.ಜಗತ್ತನ್ನು ಮೀರಿ ಅವನಿದ್ದಾನೆ.) *ತ್ಯಕ್ತೇನ ಭುಂಜೀಥಾ ಎಂದಿದೆ. ಎಂದರೆ ತ್ಯಾಗ ಮಾಡಿ ನೀನೂ ಅನುಭವಿಸು. ಭುಂಜೀಥಾ ಎಂದರೆ ಉಣ್ಣಬೇಕು ಎಂದರೆ ಅನುಭವಿಸಬೇಕು ಎಂಬ ಅರ್ಥ ಬರುವುದು. ತ್ಯಾಗ ಮಾಡಲು ಅಗತ್ಯವಾದುದಕ್ಕಿಂತ ಹೆಚ್ಚು ದುಡಿಯಬೇಕು-ಸಂಪಾದಿಸಬೇಕು. ಜಗತ್ತನ್ನು ನಿರಾಕರಿಸಬೇಕಿಲ್ಲ. ಜಗತ್ತಿನಲ್ಲಿ ನೀನೂ ಸುಖವಾಗಿರು, ಬೇರೆಯವರನ್ನೂ ಸುಖವಾಗಿರಿಸಲು ಪ್ರಯತ್ನಿಸು, ಬಿಟ್ಟು ಹೋಗುವ ಈ ಸಂಪತ್ತು ಯಾರದ್ದೂ ಅಲ್ಲ. . ಅತಿಯಾಸೆ ಬೇಡ ಇದು ಜೀವನದ ಸೂತ್ರ. (ಮಾ ಗೃಧಃ ಹದ್ದಿನಂತೆ ದುರಾಸೆಯುಳ್ಳವನಾಗಬೇಡ. ಹದ್ದು ದುರಾಸೆಗೆ ಹೆಸರಾಗಿದೆ. ಕಸ್ಯಸ್ವಿದ್ಧನಂ ಈ ಧನ ಯಾರದ್ದು? ಎಂದರೆ ಯಾರದ್ದೂ ಅಲ್ಲ ಎಂದು ಅರ್ಥ. ಕಾರಣ ಬಿಟ್ಟು ಹೋಗುವಂಥಾದ್ದು ) *ಭಕ್ತಿ ಪಂಥದವರು ತ್ಯಕ್ತೇನ ಎಂದರೆ ದೇವರಿಂದ ತ್ಯಕ್ತ ವಾದ -ಕೊಟ್ಟಿದ್ದನ್ನು ಅನುಭವಿಸು ಎಂದು ಅರ್ಥ ಮಾಡುತ್ತಾರೆ. ಅಲ್ಲಿ ದುಡಿಯುವ, ತ್ಯಾಗಮಾಡುವ- ಉಪಕಾರ ಮಾಡುವ ಮಾತೇ ಇಲ್ಲ !. ಏಕೆಂದರೆ ಎಲ್ಲವೂ ಅವರವರ ಕರ್ಮದಂತೆ, ದೇವರ ಇಚ್ಛೆಯಂತೆ ಜಗತ್ತು ನಡೆಯುವುದು. ಭಕ್ತನು ಪರಮಾತ್ಮನನ್ನು ನೆನೆಯುವದನ್ನು ಬಿಟ್ಟು ಬೇರೇನನ್ನೂ ಮಾಡಬೇಕಾದ್ದಿಲ್ಲ. 'ಕಸ್ಯಸ್ವಿದ್ಧನಂ' ಎಂಬುದಕ್ಕೆ ಪರಮಾತ್ಮನದ್ದಲ್ಲದ ಬೇರೆ ಸಂಪತ್ತು ಯಾವುದಿದೆ-ಯಾವುದೂ ಇಲ್ಲ, ಎಲ್ಲಾ ಅವನಿಗೆ ಸೇರಿದ್ದು, ಎಂದು ಅರ್ಥಮಾಡುತ್ತಾರೆ. ಎಲ್ಲವೂ ಪರಮಾತ್ಮನ ಅಧೀನ;ಭಕ್ತನ ಕೈಯಲ್ಲಿ ಏನಾಗುವುದು? ಇದು ಅವರ ವಾದ ಸರಣಿ. ⏎ *ಅದು ಜೀವನದ ಮುಖ್ಯವಾದ ಕರ್ತವ್ಯದಿಂದ ವಿಮುಖವಾದ ಜೀವನ ಕ್ರಮ ಎನಿಸುವುದು. ಜೀವನದಲ್ಲಿ, ಕರ್ತವ್ಯ - ದುಡಿಮೆ, ಸೇವೆ, ಪರೋಪಕಾರ, ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ, ಇರಬೇಕಾಗುವುದು; ಇವೆಲ್ಲಾ [[ಗೀತೆ]] ಮತ್ತು [[ಉಪನಿಷತ್ತಿ|ಉಪನಿಷತ್ತಿನ]] ಉಪದೇಶ ಸಾರ. ನಂತರ ಕರ್ಮದ :[[ಕರ್ಮ]] [[ವ್ಯಾಖ್ಯಾನ]] : ಕರ್ಮದ ಮೇಲೆ ಕ್ಲಿಕ್ ಮಾಡಿ === ಮಂತ್ರ ೨ === ----------------------------------------------- : * ಕುರ್ವನ್ನೇವೇಹ ಕರ್ಮಾಣಿ| * ಜಿಜೀವಿಷೇಚ್ಛತಂ ಸಮಾಃ | * ಏವಂ ತ್ವಯಿ ನಾನ್ಯಥೇತೋಸ್ತಿ| (contracted; show full)-------------- ಈಶಾವಾಸ್ಯೋಪನಿಷತ್ - ಸ್ವಾಮಿ ಆದಿದೇವಾನಂದ ------------ [[ಈಶಾವಾಸ್ಯೋಪನಿಷತ್]] [[Wikipedia:ಈಶಾವಾಸ್ಯ ಉಪನಿಷತ್]] Bschandrasgr ೦೭:೩೬, ೬ ಜನವರಿ ೨೦೧೨ (UTC) * ವರ್ಗ: [[ಹಿಂದೂ ಧರ್ಮ]] | [[ಉಪನಿಷತ್ತುಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=289910.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|