Difference between revisions 283822 and 289909 on knwiki

{{merge from|ಪುಟ‎}}
<big>'''ಈಶೋಪನಿಷತ್ತು'''</big> ((ಕನ್ನಡ ಭಾವಾನುವಾದ ಮತ್ತು ವ್ಯಾಖ್ಯಾನ : [[ಬಿ.ಎಸ್.ಚಂದ್ರಶೇಖರ]] [[ಸಾಗರ]] ; ೨೨-೯-೨೦೦೯/2-1-2012) 
ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್ತುಗಳು]], ವೇದದ ಅಂಗಗಳಾದ [[ಬ್ರಾಹ್ಮಣ]],ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ [[ಈಶಾವಾಸ್ಯೋಪನಿಷತ್ತು]] ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು.  ಅದಕ್ಕೆ ಈಶೋಪನಿಷತ್ತು ಎಂಬ 
ಹೆಸರೂ ಇದೆ. 
ಇದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ.  [[ಭಗವದ್ಗೀತೆ]]  ಇದರ ವಿಸ್ತಾರ ರೂಪ ಎಂಬ ಅಭಿಪ್ರಾಯವಿದೆ.  

[[ವೇದಾಂತ]], [[ಉಪನಿಷತ್ತು|ಉಪನಿಷತ್ತುಗಳು]] ಈ ಜಗತ್ತನ್ನು ನಿರಾಕರಿಸುತ್ತವೆ ಮತ್ತು ಕೇವಲ [[ಮೋಕ್ಷ]], ಪರಲೋಕ ಪರವಾದದ್ದೆಂಬ  ಭಾವನೆ ಇದೆ. ಸಂನ್ಯಾಸಿಗಳಾದವರು  ಇವಕ್ಕೆ ವ್ಯಾಖ್ಯಾನ ಟೀಕೆ  ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ  ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ  ಅಗತ್ಯವಾದ ಕಾಯಕಕ್ಕೆ  ಪ್ರಾಧಾನ್ಯತೆ ಕೊಡದಿರುವದು ಕಂಡುಬರುವುದು; ಅದು ಸ್ವಾಭಾವಿಕವೂ  ಹೌದು. ಆದರೆ [[ಉಪನಿಷತ್ತಿ|ಉಪನಿಷತ್ತಿನ]] ಸಾಮಾನ್ಯ -ಸರಳ ಅರ್ಥವನ್ನು  ನೋಡುವಾಗ ಕಾಯಕಕ್ಕೂ   ಪ್ರಾಮುಖ್ಯತೆ ಕೊಟ್ಟಿರುವುದು ಕಾಣುತ್ತದೆ.   ಇಲ್ಲಿ [[ಉಪನಿಷತ್]] ಮಂತ್ರಗಳ ಸಾಮಾನ್ಯ -ಸರಳ ಅರ್ಥವನ್ನೇ  ಪರಿಗಣಿಸಲಾಗಿದೆ.  ಕಾಯಕ, ಸೇವೆ, ಮೋಕ್ಷ ಸಾಧನೆಗಳಲ್ಲಿ ಸಮಾನವಾಗಿ ತೊಡಗಿದ್ದ  [[ಮಹಾತ್ಮಾ |ಗಾಂಧೀಜೀ]] ಯವರ ತತ್ವ -  ಸಿದ್ಧಾಂತಗಳಿಗೂ ಹೊಂದಾಣಿಕೆಯಾಗುವುದು.      
== ಶಾಂತಿ ಮಂತ್ರ==
* ಓಂ ಪೂರ್ಣಮದಃ ಪೂರ್ಣಮಿದಂ |     

  
* ಪೂರ್ಣಾತ್ಪೂರ್ಣಮುದಚ್ಯತೇ ||   



  
* ಪೂರ್ಣಸ್ಯ ಪೂರ್ಣಮಾದಾಯ | 

  
* ಪೂರ್ಣಮೇವಾವಶಿಷ್ಯತೇ ||     



  
* ಓಂ ಶಾಂತಿಃ ಶಾಂತಿಃ ಶಾಂತಿಃ||  
-
'''ಕನ್ನಡ'''

* ಓಂ, ಅದುಪೂರ್ಣ-ವಿದು ಪೂರ್ಣ| ಪೂರ್ಣದಿಂ ಪೂರ್ಣ ಹುಟ್ಟಿಹುದು | 


* ಕಳೆ ಪೂರ್ಣದಿಂ ಪೂರ್ಣವನು||  ಪೂರ್ಣವೇ ತಾನುಳಿಯುವುದು ||  
* ಓಂ  ಶಾಂತಿಃ  ಶಾಂತಿಃ  ಶಾಂತಿಃ ||      


* 
*(ಅದು ಪೂರ್ಣವು + ಇದು ಪೂರ್ಣ,  ಪೂರ್ಣದಿಂದ ಪೂರ್ಣ ಹುಟ್ಟಿದೆ.  ಪೂರ್ಣದಿಂದ ಪೂರ್ಣವನ್ನು ಕಳೆ,  ಪೂರ್ಣವೇ ಉಳಿಯುವುದು:   ಸೂತ್ರ : ಪೂರ್ಣ + ಪೂರ್ಣ =ಪೂರ್ಣ;  ಪೂರ್ಣ- ಪೂರ್ಣ = ಪೂರ್ಣ)  
ಇದು  ಆಧುನಿಕ ಗಣಿತ ಸೂತ್ರದಂತೆ ತೋರುವುದು.      
(೦+೦=೦,೦-೦=೦ ಅಥವಾ ಅನಂತ). ಪಾಶ್ಚಿಮಾತ್ಯಜಗತ್ತಿಗೆ  ಗಣಿತದಲ್ಲಿ ಸೊನ್ನೆಯ ಕಲ್ಪನೆ ಬಂದದ್ದು ಸುಮಾರು ಒಂದು ಸಾವಿರ ವರ್ಷದ ಹಿಂದೆ. ಸುಮಾರು ಐದು ಸಾವಿರ ವರ್ಷದ ಹಿಂದಿನ ಈ ಮಂತ್ರದಲ್ಲಿ ಈ ಅಮೂರ್ತ ಸೂತ್ರ ಒಂದು ವಿಸ್ಮಯ.      
*ಆದರೆ  ಇದು ಮೋಕ್ಷ ಶಾಸ್ತ್ರದ ಪೀಠಿಕೆ. ಅದಕ್ಕೆ ತಾತ್ವಿಕ  ಅರ್ಥವೇ ಸರಿ.  ಪರಮಾತ್ಮ ತತ್ವವು ಪರಿಪೂರ್ಣ. ಅದರಿಂದ ಹುಟ್ಟಿದ ಈ ಜಗತ್ತೂ ಪರಿಪೂರ್ಣ.  ಆದರೆ ಅದು ಹುಟ್ಟಿದ್ದರಿಂದ ಅಧಿಕವಾಗಿಲ್ಲ. ಈ ಜಗತ್ತು ಲಯವಾದರೂ ಒಟ್ಟು ಆ ಪರಮಾತ್ಮ  ತತ್ವದಲ್ಲಿ  ಕಡಿಮೆಯಾಗದು.  ಇದು ತತ್ವ ಸಾರ.  ಈ ತತ್ವ ದಾರ್ಶನಿಕ ಋಷಿಯ  ಅನುಭವವಾದ್ದರಿಂದ ತರ್ಕಕ್ಕೆ ನಿಲುಕದು.ಆದರೂ ತತ್ವ ಶಾಸ್ತ್ರವು ಸಾಮಾನ್ಯರ ತಿಳುವಳಿಕೆಗಾಗಿ ತರ್ಕವನ್ನು ಅವಲಂಬಿಸಿದೆ.  :
*(ಉದಾ: ಕನಸಿನಲ್ಲಿ ಸಂತೆಗೆ ಹೋದವನು ಎಚ್ಚರಾದಾಗ ತಾನೊಬ್ಬನೇ ಇರುವುದನ್ನು ಕಾಣುತ್ತಾನೆ. ಕನಸು ಕಾಣುವಾಗ ಅನೇಕ ಜನರಿದ್ದರೂ ಹೆಚ್ಚೂ ಇಲ್ಲ, ಕನಸು ಲಯವಾದಾಗ ಆ ಜನರೆಲ್ಲಾಮಾಯವಾದರೂ ಕಡಿಮೆಯಾಗಲೂ ಇಲ್ಲ.).

ಈ ಶಾಂತಿ ಮಂತ್ರದಲ್ಲಿಈ ಉಪನಿಷತ್ತಿನ  ಸಾರವನ್ನೇ ಹೇಳಿದಂತಿದೆ.     [[ಈಶ]]  .

==ಮಂತ್ರ ೧== 
ಹರಿಃ ಓಂ |

ಈಶಾವಾಸ್ಯಮಿದಂ(ದಗ್೦) ಸರ್ವಂ |

ಯತ್ಕಿಂಚ ಜಗತ್ಯಾಂ ಜಗತ್ |

(contracted; show full)--------------
ಈಶಾವಾಸ್ಯೋಪನಿಷತ್  - ಸ್ವಾಮಿ ಆದಿದೇವಾನಂದ
------------
[[ಈಶಾವಾಸ್ಯೋಪನಿಷತ್]]
[[Wikipedia:ಈಶಾವಾಸ್ಯ ಉಪನಿಷತ್]] 
Bschandrasgr ೦೭:೩೬, ೬ ಜನವರಿ ೨೦೧೨ (UTC)

* ವರ್ಗ:   [[ಹಿಂದೂ ಧರ್ಮ]]  |   [[ಉಪನಿಷತ್ತುಗಳು]]