Difference between revisions 573747 and 672410 on knwiki

{| border="1" cellpadding="2" cellspacing="0" align="right" width="250px" style="margin-left:10px"
|-
| align="center" colspan="2" | <font size="+1">'''ಮುಂಬೈ'''</font><br />
[[ಚಿತ್ರ:Gateway.jpg|thumb|none|ಗೇಟ್‍ವೇ ಅಫ್ ಇ೦ಡಿಯಾ]]
|- 
| ವರ್ಗೀಕರಣ
| ಮೆಟ್ರೊಪಾಲಿಟನ್ ನಗರ
|- 
(contracted; show full)್ಯಾಥರೀನ್ ದ ಬ್ರಗಾಂಝ ಇವರ ವಿವಾಹದ ಸಂದರ್ಭದಲ್ಲಿ , ಮುಂಬಯಿ ಪ್ರದೇಶವನ್ನು ಪೋರ್ಚುಗೀಸರಿಂದ ಬಳುವಳಿಯಾಗಿ ಪಡೆದ ಬ್ರಿಟಿಷ್ ರಾಜಮನೆತನವು, ಮುಂದೆ [[ಈಸ್ಟ್ ಇಂಡಿಯಾ ಕಂಪನಿ|ಈಸ್ಟ್ ಇಂಡಿಯಾ ಕಂಪನಿಗೆ]] ಬಾಡಿಗೆಯ ಮೇಲೆ ಮುಂಬಯಿಯನ್ನು ನೀಡಿತು. ತಮ್ಮ ವ್ಯಾಪಾರಕ್ಕಾಗಿ ಬಂದರು ನಿರ್ಮಿಸಲು ಮುಂಬಯಿ ಭೂ ಖಂಡವು ಪ್ರಶಸ್ತವಾದದ್ದು ಎಂದು ಈಸ್ಟ್ ಇಂಡಿಯಾ ಕಂಪನಿ ಭಾವಿಸಿತು. ೧೬೬೧ರಲ್ಲಿ ೧೦,೦೦೦ದಷ್ಟಿದ್ದ ಮುಂಬಯಿಯ ಜನಸಂಖ್ಯೆ ೧೬೮೭ರಲ್ಲಿ ೬೦,೦೦೦ಕ್ಕೇರಿತ್ತು. ೧೬೮೭ರಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಕಾರ್ಯಾಲಯವನ್ನು ಸೂರತ್ತಿನಿಂದ ಮುಂಬಯಿಗೆ ಬದಲಾಯಿಸಿತು.ಕಾಲಾಂತರದಲ್ಲಿ ಇದು ಮುಂಬಯಿ ಪ್ರಾಂತದ (Bombay Province) ರಾಜಧಾನಿಯಾಯಿತು.
  

ಹಾರ್ನ್^ಬೀ ವೆಲ್ಲಾರ್ಡ್ (Hornby Vellard)ಎಂಬ ಯೋಜನೆಯಲ್ಲಿ ೧೮೧೭ರಿಂದ ೧೮೪೫ರ ವರೆಗೂ ಮುಂಬಯಿಯ ಏಳು ದ್ವೀಪಗಳನ್ನು ಜೋಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಮುಂಬಯಿಯ ವಿಸ್ತೀರ್ಣ ೪೩೮ ಚದರ ಕಿ.ಮೀ ಗಳಿಗೇರಿತು. [[ಏಶಿಯಾ|ಏಶಿಯಾದಲ್ಲಿಯೇ]] ಮೊಟ್ಟಮೊದಲ ರೈಲು ಮಾರ್ಗವನ್ನು ಮುಂಬಯಿಯಲ್ಲಿ ೧೮೫೩ರಲ್ಲಿ ನಿರ್ಮಿಸಲಾಯಿತು. [[ಅಮೆರಿಕಾ|ಅಮೆರಿಕಾದಲ್ಲಿ]] ಅಂತರ್ಯುದ್ಧ (Civil War)ದ ಕಾಲದಲ್ಲಿ , ಜಗತ್ತಿನ ಪ್ರಮುಖ ಅರಳೆಪೇಟೆಗಳಲ್ಲಿ ಒಂದು ಎಂಬ ಹೆಸರು ಪಡೆದುಕೊಂಡ ಮುಂಬಯಿ, ಭರದಿಂದ ಬೆಳೆಯತೊಡಗಿತು. ಸುಯೆಝ್ ಕಾಲುವೆಯ ನಿರ್ಮಾಣವಾದ ಮೇಲೆ ಮುಂಬಯಿ ಅರಬ್ಬೀ ಸಮುದ್ರದ ಪ್ರಮುಖ ಬಂದರಾಯಿತು.  

ಮುಂಬಯಿ ಮುಂದಿನ ೩೦ ವರ್ಷಗಳಲ್ಲಿ ದಾಪುಗಾಲಿನಿಂದ ಪ್ರಗತಿ ಹೊಂದಿತು. ೧೯೦೬ರ ಸುಮಾರಿಗೆ ಮುಂಬಯಿಯ ಜನಸಂಖ್ಯೆ ೧೦ ಲಕ್ಷ ದಾಟಿ, [[ಕೋಲ್ಕತ್ತಾ|ಕೋಲ್ಕತ್ತಾಬಿಟ್ಟರೆ]] ಭಾರತದ ಅತಿ ದೊಡ್ಡ ನಗರವಾಗಿ ಹೆಸರಾಯಿತು. ಮುಂಬಯಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಪ್ರಮುಖ ಸ್ಥಾನ ಹೊಂದಿತ್ತು. ೧೯೪೨ರಲ್ಲಿ ಮಹಾತ್ಮ ಗಾಂಧಿ ಸುಪ್ರಸಿದ್ಧ 'ಭಾರತ ಬಿಟ್ಟು ತೊಲಗಿ' (ಚಲೇಜಾವ್) ಚಳುವಳಿಗೆ ನಾಂದಿ ಹಾಡಿದ್ದು ಮುಂಬಯಿಯಲ್ಲಿಯೇ. ಸ್ವಾತಂತ್ರ್ಯಾನಂತರ ಮುಂಬಯಿ ಪ್ರಾಂತೀಯ ರಾಜಧಾನಿಯಾಯಿತು. ೧೯೫೦ರಲ್ಲಿ ಮುಂಬಯಿ ಸಾಲ್ಸೆಟ್ ದ್ವೀಪದವರೆಗೂ ಹಬ್ಬಿತ್ತು.  

೧೯೫೫ರ ಸುಮಾರಿಗೆ ಮುಂಬಯಿ ಪ್ರಾಂತವನ್ನು [[ಮಹಾರಾಷ್ಟ್ರ]] ಹಾಗೂ [[ಗುಜರಾತ್]] ಎಂದು ವಿಭಜಿಸಬೇಕು ಎಂಬ ಕೂಗು ಹೆಚ್ಚಾಗತೊಡಗಿತು. ಮುಂಬಯಿ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರೆಯಬೇಕು ಎಂದೂ ಕೆಲವರ ಅಭಿಮತವಾಗಿತ್ತು. ಸಂಯುಕ್ತ [[ಮಹಾರಾಷ್ಟ್ರ]] ಚಳುವಳಿ ಇದನ್ನು ವಿರೋಧಿಸಿ , ಮುಂಬಯಿಯನ್ನು [[ಮಹಾರಾಷ್ಟ್ರ|ಮಹಾರಾಷ್ಟ್ರದ]] ರಾಜಧಾನಿಯಾಗಿ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು.  

ಎಪ್ಪತ್ತರ ದಶಕದಲ್ಲಿ ಮುಂಬಯಿಯಲ್ಲಿ ಕಟ್ಟಡ ನಿರ್ಮಾಣ ಉದ್ಯಮ ಭರದಿಂದ ಪ್ರಗತಿಯಾಗಿ , ದೊಡ್ಡಪ್ರಮಾಣದಲ್ಲಿ ಪರಪ್ರಾಂತೀಯರ ವಲಸೆ ಮುಂಬಯಿಯತ್ತ ಹರಿದುಬಂದಿತು. ಇದೇ ಕಾಲದಲ್ಲಿ ಮುಂಬಯಿ [[ಕೋಲ್ಕತ್ತಾ|ಕೋಲ್ಕತ್ತಾವನ್ನು]] ಹಿಂದೆ ಹಾಕಿ [[ಭಾರತ|ಭಾರತದ]] ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹೆಚ್ಚುತ್ತಿದ್ದ ಪರಪ್ರಾಂತೀಯರ ಸಂಖ್ಯೆಯಿಂದ ಸ್ಥಳಿಯರಲ್ಲಿ ಅಸಮಾಧಾನ ಹೊಗೆಯಾಡತೊಡಗಿತು. ಇದರ ಪರಿಣಾಮವಾಗಿ, ಸ್ಥಳೀಯ ನಾಗರೀಕರ ಹಿತರಕ್ಷಣೆಯ ಧ್ಯೇಯಹೊತ್ತ [[ಶಿವಸೇನಾ]] ಎಂಬ ರಾಜಕೀಯ ಸಂಘಟನೆಯ ಉದಯವಾಯಿತು. [[ಬಾಳಾಸಾಹೇಬ ಠಾಕರೆ|ಬಾಳಾಸಾಹೇಬ ಠಾಕರೆಯವರ]] ನೇತೃತ್ವದ ಈ ಸಂಘಟನೆಗೆ ಸ್ಥಳೀಯರ ಪ್ರಚಂಡ ಬೆಂಬಲ ದೊರಕಿ, ಅದು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಸಹಾಯಕವಾಯಿತು.
== ಭೂಗೋಳ ==
[[ಭಾರತ|ಭಾರತದ]] ಪಶ್ಚಿಮ ತೀರದ , [[ಕೊಂಕಣ]] ಪ್ರದೇಶದಲ್ಲಿರುವ [[ಉಲ್ಹಾಸ ನದಿ|ಉಲ್ಹಾಸ ನದಿಯ]] ಮುಖಜ ಪ್ರದೇಶವಾಗಿರುವ [[ಶಾಸ್ತಿ ದ್ವೀಪ|ಶಾಸ್ತಿ ದ್ವೀಪದ]] (ಸ್ಥಳೀಯ ಬಳಕೆಯಲ್ಲಿ ಸಾಲ್ಸೆಟ್) ಒಂದು ಭಾಗ ಮುಂಬಯಿ ನಗರ. ಇಲ್ಲಿಯ ಬಹುತೇಕ ಭಾಗ ಸಮುದ್ರ ಮಟ್ಟದಲ್ಲಿದ್ದು, ಸರಾಸರಿ ಎತ್ತರ (ಸಮುದ್ರ ಮಟ್ಟದಿಂದ) ೧೦ರಿಂದ ೧೫ ಮೀಟರಿನಷ್ಟಿದೆ. ಮುಂಬಯಿಯ ಉತ್ತರ ಭಾಗವು ಗುಡ್ಡಗಾಡಾಗಿದ್ದು , ೪೫೦ ಮೀಟರು ಅತಿ ಎತ್ತರದ ಭಾಗವಾಗಿದೆ. ಮುಂಬಯಿಯ ವಿಸ್ತೀರ್ಣ ೪೬೮ ಚದರ ಕಿ.ಮೀ. 
ನಗರದ ಸರಹದ್ದಿನಲ್ಲಿಯೇ [[ತುಳಸಿ]], [[ವಿಹಾರ]] ಮತ್ತು [[ಪೊವಾಯಿ]] ಎಂಬ ಮೂರು ಕೆರೆಗಳಿವೆ. ಇದರಲ್ಲಿ ಮೊದಲ ಎರಡು [[ಬೋರಿವಲಿ ರಾಷ್ಟ್ರೀಯ ಉದ್ಯಾನವನ|ಬೋರಿವಲಿ ರಾಷ್ಟ್ರೀಯ ಉದ್ಯಾನವನದ]] ಒಳಗಿದ್ದು , ಮುಂಬಯಿಯ ಕುಡಿಯುವ ನೀರನ್ನು ಭಾಗಶಃ ಪೂರೈಸುತ್ತವೆ. ಇದೇ ಉದ್ಯಾನದಿಂದಲೇ ಉಗಮವಾಗುವ ಮೂರೂ ಸಣ್ಣ ನದಿಗಳೂ ಮುಂಬಯಿ ನಗರದಲ್ಲಿ ಹರಿಯುತ್ತವೆ.  

ನಗರದ ಕಿನಾರೆಯಲ್ಲಿ ಅನೇಕ ಕೊಲ್ಲಿಗಳು (bays and creeks) ಕಂಡುಬರುತ್ತವೆ. ಸಾಲ್ಸೆಟ್ ದ್ವೀಪದ ಪೂರ್ವಭಾಗದಲ್ಲಿ ವಿಪುಲವಾದ ಜೀವವೈವಿಧ್ಯವಿರುವ mangrove swamps ಗಳಿವೆ. ಪಶ್ಚಿಮಭಾಗದಲ್ಲಿ [[ಜುಹು]] ಮತ್ತು [[ಚೌಪಾಟಿ]] ಎಂಬ ಎರಡು ಬೀಚುಗಳಿವೆ.  

ಸಮುದ್ರಸಾಮೀಪ್ಯದ ಕಾರಣ ಇಲ್ಲಿ ಮಣ್ಣಿನ ಮೇಲ್ಪದರ ಮರಳುಮಿಶ್ರಿತವಾಗಿದೆ. ಉಪನಗರಗಳಲ್ಲಿ alluvial and loamy ಮಣ್ಣಿನ ಪದರ ಬಹುತೇಕವಾಗಿ ಕಾಣಬರುತ್ತದೆ. ಸಮೀಪದಲ್ಲಿರುವ ಮೂರು ಭೂಬಿರುಕುಗಳ (faults) ಕಾರಣ ಮುಂಬಯಿ ನಗರ ಸಕ್ರಿಯ ಭೂಕಂಪ ವಲಯದಲ್ಲಿದೆ. ಭೂಕಂಪ ಸಾಧ್ಯತೆಯಲ್ಲಿ ಮುಂಬಯಿಯನ್ನು ಮೂರನೆಯ ವಲಯವೆಂದು ನಮೂದಿಸಲಾಗಿದೆ, ಅಂದರೆ, ರಿಚ್ಟರ್ ಮಾಪಕದಲ್ಲಿ ೬.೫ ರ ಪರಿಮಾಣದ ಭೂಕಂಪವಾಗುವ ಸಾಧ್ಯತೆಗಳಿವೆ.  

ಮುಂಬಯಿ ಮಹಾನಗರವನ್ನು ನಗರ ಮತ್ತು ಉಪನಗರ ಎಂದು ಎರಡು ಪ್ರದೇಶಗಳಾಗಿ ವಿಂಗಡಿಸಲಾಗಿದ್ದು, ಇವೆರಡೂ ಮಹಾರಾಷ್ಟ್ರದ ಪ್ರತ್ಯೇಕ ಜಿಲ್ಲೆಗಳೂ ಆಗಿವೆ. ಇದರಲ್ಲಿ ನಗರ ಪ್ರದೇಶವನ್ನು ದ್ವೀಪ ನಗರ ( Island City) ಎಂದೂ ಕರೆಯಲಾಗುತ್ತದೆ.
== ಹವಾಮಾನ ==
ಉಷ್ಣವಲಯದಲ್ಲಿ ಹಾಗೂ ಸಮುದ್ರದದಂಡೆಯಲ್ಲಿರುವ ಮುಂಬಯಿಯಲ್ಲಿ ಎರಡು ಋತುಗಳು ಮುಖ್ಯವಾಗಿವೆ.  

'''ಆರ್ದ್ರ ಹವಾಮಾನ''' ಮಾರ್ಚಿಯಿಂದ ಆಕ್ಟೋಬರ್ ವರೆಗಿದ್ದು , ಈ ಕಾಲದಲ್ಲಿ ವಾತಾವರಣದಲ್ಲಿ ನೀರಿನಂಶ ಹೆಚ್ಚಿರುತ್ತದೆ. ದಿನದ ತಾಪಮಾನ ೩೦ ಡಿಗ್ರಿ ಸೆಂಟಿಗ್ರೇಡ್ ವರೆಗಿರುತ್ತದೆ. ಜೂನಿನಿಂದ ಸೆಪ್ಟೆಂಬರಿನವರೆಗೂ ಅನುಭವಕ್ಕೆ ಬರುವ ಮಳೆಗಾಲದಲ್ಲಿ ಜಡಿಮಳೆ ಸಾಮಾನ್ಯ. ಸರಾರಿ ವಾರ್ಷಿಕ ಮಳೆ ೨೨೦೦ ಮಿ.ಮೀ. ೧೯೫೪ರಲ್ಲಿ ಬಿದ್ದ ೩೪೫೨ ಮಿ.ಮೀ ಮಳೆ ವಾರ್ಷಿಕ ದಾಖಲೆಯಾದರೆ, ಜುಲೈ ೨೬, ೨೦೦೫ ರಂದು ಬಿದ್ದ ೯೪೪ ಮಿ.ಮೀ ಮಳೆ ಒಂದೇ ದಿನದಲ್ಲಿ ಬಿದ್ದ ಅತಿ ಹೆಚ್ಚು ಮಳೆ.  

ನವೆಂಬರಿನಿಂದ ಫೆಬ್ರುವರಿಯವರೆಗೆ '''ಒಣ ಹವೆ'''ಯಿರುತ್ತದೆ. ವಾತಾವರಣವೂ ತಕ್ಕಮಟ್ಟಿಗೆ ತಂಪಾಗಿರುತ್ತದೆ. ಉತ್ತರದಿಂದ ಬೀಸುವ ತಂಗಾಳಿಯೇ ಈ ಬದಲಾವೆಣೆಗೆ ಕಾರಣ. ವಾರ್ಷಿಕ ತಾಪಮಾನ ಗರಿಷ್ಠ ೩೮ ಡಿಗ್ರಿ ಇದ್ದರೆ, ಕನಿಷ್ಠ ೧೧ ಡಿಗ್ರಿಯವರೆಗಿರುತ್ತದೆ. ೪೩ ಡಿಗ್ರಿ ಮತ್ತು ೭.೪ ಡಿಗ್ರಿ , ಕ್ರಮವಾಗಿ, ಅತಿ ಹೆಚ್ಚು ಮತ್ತು ಅತಿ ಕಡಿಮೆ ತಾಪಮಾನದ ದಾಖಲೆಗಳು.
== ಅರ್ಥ ವ್ಯವಸ್ಥೆ ==
ಮುಂಬಯಿಯನ್ನು ಭಾರತದ ಆರ್ಥಿಕ ರಾಜಧಾನಿ ಎನ್ನಲಾಗುತ್ತದೆ. ಭಾರತದ ೧೦% ಔದ್ಯೋಗಿಕ ಕಾರ್ಮಿಕರು ಮುಂಬಯಿಯಲ್ಲಿದ್ದಾರೆ. [[ಭಾರತ|ಭಾರತದ]] ಆದಾಯ ತೆರಿಗೆಯ ೪೦%, ಕೇಂದ್ರ ಅಬಕಾರಿಯ (Central excise) ೨೦%, ಕಸ್ಟಮ್ಸ್ ಸುಂಕದ ೬೦% , ರಫ್ತು ವ್ಯಾಪಾರದ ೪೦% , ಅಷ್ಟೇ ಅಲ್ಲ ೪೦ ಬಿಲಿಯನ್ ರೂಪಾಯಿಯ ವ್ಯಾವಸಾಯಿಕ ತೆರಿಗೆ (Professional Tax) ಮುಂಬಯಿಯಿಂದ ಬರುತ್ತದೆ. ಭಾರತದ ಪ್ರಮುಖ ಆರ್ಥಿಕ ಸಂಸ್ಥೆಗಳು ಮುಂಬಯಿಯಲ್ಲಿದ್ದು, [[ಮುಂಬಯಿ ಶೇರು ಬಜಾರು]], [[ಭಾರತೀಯ ರಿಸರ್ವ್ ಬ್ಯಾಂಕ್]] , [[ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್]] ಇವೇ ಅಲ್ಲದೇ [[ಟಾಟಾ]], [[ಗೋದ್ರೇಜ್]] ಮತ್ತು [[ರಿಲಯನ್ಸ್]] ನಂಥಹಾ ಮಹಾ ಉದ್ಯೋಗಸಮೂಹಗಳ ಮುಖ್ಯ ಕಛೇರಿಗಳು ಮುಂಬಯಿಯಲ್ಲಿವೆ. ಅನೇಕ ವಿದೇಶೀ ಬ್ಯಾಂಕುಗಳೂ ತಮ್ಮ ಶಾಖೆಗಳನ್ನು ಮುಂಬಯಿಯಲ್ಲಿ ತೆರೆದಿವೆ.  

ಸುಮಾರು ೧೯೮೦ರವರೆಗೂ ಮುಂಬಯಿಯ ಬಟ್ಟೆ ಗಿರಣಿಗಳು ಆರ್ಥಿಕ ವ್ಯವಸ್ಥೆಯ ಆಧಾರಸ್ಥಂಭಗಳಾಗಿದ್ದವು. ಆದರೆ ಈಗ ತಂತ್ರಜ್ಙಾನ, ಆಭರಣಗಳ ಪಾಲೀಶ್ ಮಾಡುವಿಕೆ, ಆರೋಗ್ಯ, ಮಾಹಿತಿ ತಂತ್ರಜ್ಙಾನ ಮೊದಲಾದ ಉದ್ಯಮಗಳು ಮಹತ್ವದ ಕೊಡುಗೆ ನೀಡುತ್ತಿವೆ.ಮುಂಬಯಿ ರಾಜಧಾನಿಯೂ ಆಗಿರುವ ಕಾರಣ, ರಾಜ್ಯ ಹಾಗೂ ಕೇಂದ್ರ ಸರಕಾರೀ ನೌಕರರು ಸಹಾ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹಾಗೆಯೇ ಕೈಗಾಡಿಯ ಕಿರುವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ಮೆಕ್ಯಾನಿಕ್ ಇತ್ಯಾದಿ ಉದ್ಯೋಗದಲ್ಲಿ ತೊಡಗಿಕೊಂಡಿರುವ ಕುಶಲ ಹಾಗೂ ಅ-ಕುಶಲ ಕಾರ್ಮಿಕರೂ ವಿಪುಲವಾಗಿದ್ದಾರೆ. ಮುಂಬಯಿ ಬಂದರೂ ಅನೇಕರಿಗೆ ಉದ್ಯೋಗಾವಕಾಶವನ್ನು ನೀಡಿದೆ.  

ಮುಂಬಯಿಯ ಮನರಂಜನಾ ಉದ್ಯಮವಂತೂ ಅನೇಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಭಾರತದ ಪ್ರಮುಖ ಕಿರುತೆರೆ, ಉಪಗ್ರಹ ವಾಹಿನಿಗಳು, ಪುಸ್ತಕ ಪ್ರಕಾಶನ ಸಂಸ್ಥೆಗಳ ಕೇಂದ್ರ ಮುಂಬಯಿ. '[[ಬಾಲಿವುಡ್]] ' ಎಂದೇ ಹೆಸರಾಗಿರುವ ಹಿಂದಿ ಚಲನಚಿತ್ರೋದ್ಯಮದ ಕೆಂದ್ರವೂ ಮುಂಬಯಿಯೇ.ಮುಂಬಯಿಯ ಆರ್ಥಿಕ ಪ್ರಗತಿಗೆ ಗುಜರಾತಿ, ಮಾರವಾಡಿ ಮತ್ತು ಪಾರಸೀ ಜನಾಂಗದ ಗಣನೀಯ ಕೊಡುಗೆಯಿದೆ.
== ರಾಜ್ಯ-ಸರಕಾರ ಹಾಗೂ ಮಹಾನಗರಪಾಲಿಕೆ ==
[[ಬೃಹನ್ಮುಂಬಯಿ ಮಹಾನಗರಪಾಲಿಕೆ]] ಈ ನಗರದ ಮೂಲಭೂತ ಅವಶ್ಯಕತೆಗಳಾದ ನೀರು ಸರಬರಾಜು, ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ನಿರ್ವಹಿಸುತ್ತದೆ. ಕಮೀಷನರ್ ಇದರ ಆಡಳಿತಾತ್ಮಕ ಮುಖ್ಯಾಧಿಕಾರಿಯಾಗಿದ್ದು, ಐ.ಏ.ಎಸ್ ಹುದ್ದೆಯ ಈ ಅಧಿಕಾರಿಯನ್ನು [[ಮಹಾರಾಷ್ಟ್ರ]] ಸರಕಾರ ನೇಮಿಸುತ್ತದೆ. ಆಡಳಿತಾನುಕೂಲಕ್ಕಾಗಿ ನಗರವನ್ನು ೧೪ ಉಪವಿಭಾಗಗಳಾಗಿ ವೀಭಾಗಿಸಿದ್ದು , ಪ್ರತಿಯೊಂದು ಉಪವಿಭಾಗವನ್ನೂ ಒಬ್ಬೊಬ್ಬ ಉಪ-ಕಮೀಷನರ್ ನೋಡಿಕೊಳ್ಳುತ್ತಾರೆ.  

ಮಹಾಪಾಲಿಕೆಯಲ್ಲಿ ಜನರಿಂದ ಚುನಾಯಿತರಾದ ೨೨೭ ನಗರಸೇವಕರು (ಕಾರ್ಪೋರೇಟರುಗಳು), ೫ ನಾಮಕರಣ ಮಾಡಲ್ಪಟ್ಟ ನಗರಸೇವಕರು ಹಾಗೂ ಒಬ್ಬ ಮಹಾಪೌರ (ಮೇಯರ್ ) ಇರುತ್ತಾರೆ. ರಾಜ್ಯದ ಸಾಧಾರಣ ಎರ್ಲಲಾ ರಾಜಕೀಯ ಪಕ್ಷಗಳ ಉಮೇದುವಾರರನ್ನೂ ಈ ನಗರಪಾಲಿಕೆಯ ಚುನಾವಣೆಗಳಲ್ಲಿ ಕಾಣಬಹುದು.

(contracted; show full)
== ಸಂಚಾರ ವ್ಯವಸ್ಥೆ ==
ಮುಂಬಯಿಯ ನಾಗರೀಕರು ದೈನಂದಿನ ಸಂಚಾರೀ ಅಗತ್ಯಗಳಿಗೆ ಸರಕಾರೀ ಸಾರಿಗೆಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ರಸ್ತೆಗಳ ದುಸ್ಥಿತಿಯಿಂದ ಮತ್ತು ಪಾರ್ಕಿಂಗ್ ಮಾಡಲು ಸ್ಥಳದ ಅಭಾವದಿಂದ ಖಾಸಗೀ ವಾಹನಗಳು ಅಷ್ಟಾಗಿ ಜನಪ್ರಿಯವಾಗಿಲ್ಲ. ಆದರೂ ಈಚೀಚೆಗೆ, ಲೋಕಲ್ ರೈಲಿನಲ್ಲಿಯ ಸಹಿಸಲಸಾಧ್ಯ ಜನದಟ್ಟಣೆಯಿಂದ ಬೇಸತ್ತ ಜನ ಸ್ವಂತ ವಾಹನದ ಮೊರೆ ಹೋಗುವ ಪ್ರವೃತ್ತಿಯೂ ಕಾಣಬರುತ್ತಿದೆ. ಸುಮಾರು ೩೫ ಲಕ್ಷಜನ ಲೋಕಲ್ ರೈಲಿನಲ್ಲಿ ಪ್ರತಿದಿನ, ಪ್ರಯಾಣಮಾಡುತ್ತಾರೆಂಬ ದಾಖಲೆ ಇದೆ. ಲೋಕಲ್ ರೈಲುಗಳು ಮುಂಬಯಿ ಜನಜೀವನದ ಜೀವನಾಡಿ ಎಂದು ಹೇಳಲು ಅಡ್ಡಿಯಿಲ್ಲ. ಪಶ್ಚಿಮ ಮತ್ತು ಮಧ್ಯ ರೈಲ್ವೆಗಳ ಕೇಂದ್ರ ಕಛೇರಿಗಳು ಮುಂಬಯಿಯಲ್ಲವೆ.
  

ಮುಂಬಯಿ ಲೋಕಲ್ ರೈಲು ಮೂರು ಮುಖ್ಯ ಮಾರ್ಗಗಳಲ್ಲಿ ಸಂಚರಿಸುತ್ತದೆ. ಮುಂಬಯಿಯ ಪಶ್ಚಿಮ ರೈಲ್ವೆಯ ಸಂಚಾರವಿದ್ದರೆ, ಮುಂಬಯಿಯ ಮಧ್ಯಭಾಗ ಮತ್ತು ಈಶಾನ್ಯ ಭಾಗ ಮಧ್ಯರೈಲ್ವೆ ನಿಭಾಯಿಸುತ್ತದೆ. ಆಗ್ನೇಯ ಭಾಗದ ಪ್ರದೇಶಗಳಿಗೆ ಹಾರ್ಬರ್ ಲೈನ್ ಇದೆ. ಇದು ಮಧ್ಯರೈಲ್ವೆಯ ಒಂದು ಭಾಗ. ಇವೆರಡೂ ರೈಲುಗಳ ೧೨೪ ಕಿ. ಮೀ. ಉದ್ದದ ಹಾಗೂ ಹಾರ್ಬರ್ ಲೈನಿನ ಮತ್ತೊಂದು ೫೪ ಕಿ.,ಮೀ ಉದ್ದದ ರೈಲು ಹಳಿಗಳ ಜಾಲ ಮುಂಬಯಿಯಲ್ಲಿ ಹರಡಿಕೊಂಡಿವೆ. ಮುಂಬಯಿಯಿಂದ ಭಾರತದ ಎಲ್ಲಾ ದಿಕ್ಕುಗಳಿಗೂ ಚೆನ್ನಾಗಿ ರೈಲು ಸಂಪರ್ಕವಿದೆ.  

ಮುಂಬಯಿಯ ರಸ್ತೆ ಸಾರಿಗೆಯಲ್ಲಿ ಬೆಸ್ಟ್ ( BEST - Bombay Electric Supply and Transport) ಮಹತ್ವದ ಸ್ಥಾನದಲ್ಲಿದೆ. ಈ, ಮುಂಬಯಿ ನಗರಪಾಲಿಕೆಯ ಅಧೀನದ, ಸ್ವಾಯತ್ತ ಸಂಸ್ಥೆ ನೋಡಿಕೊಳ್ಳುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ , ಕೇವಲ ಮುಂಬಯಿ ನಗರವಷ್ಟೇ ಅಲ್ಲದೇ, ಉಪನಗರಗಳು, ನವಿ ಮುಂಬಯಿ ಮತ್ತು ಠಾಣೆ ಯನ್ನೂ ಒಳಗೊಳ್ಳುತ್ತದೆ. ಬಸ್ಸುಗಳನ್ನು ಸಾಧಾರಣವಾಗಿ ಸಮೀಪದ ಅಥವಾ ಮಧ್ಯಮ ದೂರದ ಪ್ರಯಾಣಕ್ಕೆ ಉಪಯೋಗಿಸಿದರೆ, ಹೆಚ್ಚು ದೂರದ ಓಡಾಟಕ್ಕೆ ಲೋಕಲ್ ರೈಲು ಬಸ್ಸಿಗಿಂತ ಅಗ್ಗವಾಗುತ್ತದೆ. ಆದರೂ ಬಸ್ ನಲ್ಲಿ ಪ್ರಯಾಣಿಸುವವರ ಸಂಖ್ಯೆ, ೩೨ ಲಕ್ಷಕ್ಕಿಂತ ಅಧಿಕವಂತೆ. ಸಾಧಾರಣ ಬಸ್ಸುಗಳೊಂದಿಗೆ, ಮಹಡಿಬಸ್ ಹಾಗೂ ವಾತಾನುಕೂಲಿತ ಬಸ್ಸುಗಳನ್ನೂ BEST ಓಡಿಸುತ್ತದೆ. ಖಾಸಗೀ ಸಂಚಾರಕ್ಕಾಗಿ ಹಳದಿ,ಕಪ್ಪು ಬಣ್ಣದ ಟ್ಯಾಕ್ಸಿಗಳು ನಗರಗಳಲ್ಲಿ ಲಭ್ಯವಿದೆ. ಆಟೋರಿಕ್ಷಾಗಳಿಗೆ ನಗರಪ್ರದೇಶದಲ್ಲಿ ಪ್ರವೇಶವಿಲ್ಲವಾದರೂ, ಉಪನಗರಗಳಲ್ಲಿ ಇವು, ಜನಸಾಮಾನ್ಯರ ಮುಖ್ಯ ಖಾಸಗೀ ಸಂಚಾರ ಮಾಧ್ಯಮಗಳಾಗಿವೆ.  

ಮುಂಬಯಿಯ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ( ಹಳೆಯ ಹೆಸರು ಸಹಾರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ) ಭಾರತದ ಅತ್ಯಂತ ಕಿಕ್ಕಿರಿದ ವಿಮಾನ ನಿಲ್ದಾಣವಾಗಿದೆ. ಸಾಂತಾಕ್ರೂಝ್ ನಲ್ಲಿ ಭಾರತದೊಳಗಿನ ಸಂಚಾರಕ್ಕಾಗಿ ವಿಮಾಣ ನಿಲ್ದಾಣವಿದೆ.  

ಮುಂಬಯಿ ತನ್ನ ವೈಶಿಷ್ಟ್ಯಪೂರ್ಣ ಭೌಗೋಳಿಕ ಸ್ವರೂಪದಿಂದ , ಜಗತ್ತಿನಲ್ಲಿಯೇ ಅತ್ಯುತ್ತಮ ಸ್ವಾಭಾವಿಕ ಬಂದರುಗಳಲ್ಲಿ ಒಂದಾಗಿದೆ. ಭಾರತದ ಸರಕು ಹಾಗೂ ಪ್ರಯಾಣಿಕರ ಸಾಗಣೆಯಲ್ಲಿ ಮುಂಬಯಿ ಬಂದರು ೫೦% ಪಾಲು ಪಡೆದಿದೆ. [[ಭಾರತೀಯ ನೌಕಾಪಡೆ|ಭಾರತೀಯ ನೌಕಾಪಡೆಯ]] ಮಹತ್ವದ ನೆಲೆಯೂ ಮುಂಬಯಿಯಲ್ಲಿದೆ.

== ನಾಗರೀಕ ಸೌಲಭ್ಯಗಳು ==
(contracted; show full)
[[ಮಹಾರಾಷ್ಟ್ರ|ಮಹಾರಾಷ್ಟ್ರದ]] ನಾಡಭಾಷೆ [[ಮರಾಠಿ]] ಮುಂಬಯಿಯ ಮುಖ್ಯಭಾಷೆಯಾಗಿದ್ದರೂ, [[ಹಿಂದಿ]], [[ಗುಜರಾತಿ]], [[ಇಂಗ್ಲೀಷ್]], [[ಕೊಂಕಣಿ]] ಈ ಭಾಷಿಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಭಾರತದ ಬಹುತೇಕ ಎಲ್ಲಾ ಭಾಷೆಗಳ ಜನರೂ ಮುಂಬಯಿಯಲ್ಲಿ ಕಾಣಸಿಗುತ್ತಾರೆ.
  

ಮುಂಬಯಿಯ ಜನಸಂಖ್ಯೆಗೆ ಹೋಲಿಸಿದರೆ, ಅಪರಾಧಗಳ ಸಂಖ್ಯೆ ತಕ್ಕಮಟ್ಟಿಗಿದೆ. ಇಲ್ಲಿಯ ಮುಖ್ಯ ಸೆರೆಮನೆ ಅರ್ಥರ್ ರೋಡ್ ಜೈಲು.  

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಯ ನಗರಗಳಂತೆ, ಮುಂಬಯಿಯಲ್ಲಿ ಕೂಡಾ ಅತಿನಗರೀಕರಣದ ಪರಿಣಾಮವಾದ ಎಲ್ಲೆಲ್ಲಿಯೂ ಕಂಡುಬರುವ ಬಡತನ, ನೈರ್ಮಲ್ಯದ ಕೊರತೆ, ನಿರುದ್ಯೋಗ, ಮೂಲಭೂತ ಸೌಲಭ್ಯಗಳ ಅಭಾವ, ಕೊಳೆಗೇರಿಗಳ ಅನಿರ್ಬಂಧಿತ ಹೆಚ್ಚಳ ಇತ್ಯಾದಿಗಳು ಕಂಡುಬರುತ್ತವೆ. ಮುಂಬಯಿಯ ಮೂರು ಕಡೆ ನೀರಿದ್ದು ನಗರದ ಬೆಳವಣಿಗೆ ಗೆ ಜಾಗ ಕೇವಲ ಒಂದೇ ದಿಕ್ಕಿನಲ್ಲಿ ಸಾಧ್ಯವಾದ ಕಾರಣ, ನಿವೇಶನದ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ನಾಗರೀಕರು ನಗರದ ಹೊರವಲಯದ ಉಪನಗರಗಳಲ್ಲಿ ನೆಲೆಸುತ್ತಿದ್ದಾರೆ. ಕೆಲಸದ ಜಾಗಕ್ಕೂ ಮನೆಗೂ ಇದರಿಂದ ಬಹಳಷ್ಟು ದೂರವಾಗುವುದರಿಂದ , ದೈನಂದಿನ ಜೀವನದಲ್ಲಿ ಗಣನೀಯ ವೇಳೆಯನ್ನು ಸಂಚಾರದಲ್ಲಿಯೇ ಕಳೆಯುವುದು ಮುಂಬಯಿ ಜೀವನದಲ್ಲ(contracted; show full)
 
ಮುಂಬಯಿಯ ಖಾದ್ಯಸಂಸ್ಕೃತಿಯ ಸಂಕೇತವೆಂದರೆ [[ವಡಾಪಾವ್]] ಎನ್ನಬಹುದು. ಪಾನೀಪುರಿ, ಪಾವ್ ಭಾಜಿ, ಭೇಳ್ ಪುರಿ, ದಕ್ಣಿಣ ಭಾರತೀಯ, ಪಂಜಾಬೀ, ಚೈನೀಸ್ ತಿನಿಸುಗಳೂ ಮುಂಬಯಿ ಯಲ್ಲಿ ಬಹಳ ಜನಪ್ರಿಯವಾಗಿವೆ. [[ಶ್ರೀಕೃಷ್ಣ ಬಟಾಟವಡ ಅಂಗಡಿ, ದಾದರ್ (ಪ), ಮುಂಬೈ]], ದಾದರ್ ಪಶ್ಚಿಮ ದಲ್ಲಿದೆ. ಇಲ್ಲಿ ಬಿಸಿ-ಬಿಸಿ, ಬಟಾಟಾವಡ ತಿಂದು, ಚಹ- ಸೇವನೆಮಾಡುವ ಮಜವನ್ನು ಅನುಭವಿಸಬೇಕು.
  

[[UNESCO]] ಮುಂಬಯಿಗೆ ಮೂರು ಹೆರಿಟೇಜ್ ಪ್ರಶಸ್ತಿಗಳನ್ನು ಕೊಡಮಾಡಿದೆ. 
[[ಚಿತ್ರ:B 028.JPG|thumb|right|250px|'ಏಶಿಯಾಟಿಕ್ ಸೊಸೈಟಿಯ ಲೈಬ್ರೆರಿ']]
ಭಾರತೀಯ ಚಿತ್ರರಂಗದ ಜನ್ಮಸ್ಥಾನವೇ ಮುಂಬಯಿ ಎನ್ನಬಹುದು. [[ದಾದಾಸಾಹೇಬ್ ಫಾಳಕೆ]] ಭಾರತದ ಮೊಟ್ಟಮೊದಲ ಚಲನಚಿತ್ರ ತಯಾರಿಸಿದ್ದು ಮುಂಬಯಿಯಲ್ಲಿ. ವಿಪುಲವಾಗಿದ್ದ ಚಿತ್ರಮಂದಿರಗಳು ಕಳೆದ ದಶಕಗಳಲ್ಲಿ , ಕಿರುತೆರೆಯ ದಾಳಿಯಿಂದ, ತಮ್ಮ ವರ್ಚಸ್ಸು ಕಳೆದುಕೊಂಡಿದ್ದರೂ,ಮಲ್ಟಿಪ್ಲೆಕ್ಸ್ ಗಳ ರೂಪದಲ್ಲಿ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿವೆ. ರಸಿಕರಿಗಾಗಿ ನಾಟ್ಯಮಂದಿರಗಳು, ಚಿತ್ರ-ಶಿಲ್ಪ-ಕರಕುಶಲ ವಸ್ತುಗಳ ಪ್ರದರ್ಶನಕ್ಕಾಗಿ ಸರಕಾರೀ ಹಾಗೂ ಖಾಸಗೀ ರಂಗದ ಆರ್ಟ್ ಗ್ಯಾಲರಿಗಳು ಇಲ್ಲಿವೆ. ಇವುಗಳಲ್ಲಿ ಕೆಲವು ಪ್ರಸಿದ್ಧ ತಾಣಗಳೆಂದರೆ [[ಜಹಾಂಗೀರ್ ಆರ್ಟ್ ಗ್ಯಾಲರಿ]], [[ಏಶಿಯಾಟಿಕ್ ಸೊಸೈಟಿ|ಏಶಿಯಾಟಿಕ್ ಸೊಸೈಟಿಯ]] ವಾಚನಾಲಯ ಮತ್ತು [[ಛತ್ರಪತಿ ಶಿವಾಜಿ ವಸ್ತು ಸಂಗ್ರಹಾಲಯ]](ಹಳೆಯ ಹೆಸರು [[ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್]]).

[[ಬರ್ಲಿನ್]], [[ಲಂಡನ್]] , [[ಲಾಸ್ ಏಂಜಲೀಸ್]], [[ಸೆಯಿಂಟ್ ಪೀಟರ್ಸ್ ಬರ್ಗ್]],[[ಸ್ಟುಟ್ ಗರ್ಟ್]],[[ಯೋಕೋಹಾಮ]] ಈ ನಗರಗಳನ್ನು ಮುಂಬಯಿಯ ಭಗಿನಿ ನಗರಗಳೆಂದು (sister cities) ಪರಿಗಣಿಸಲಾಗಿದೆ.

== ಪ್ರಸಾರ ಮಾಧ್ಯಮಗಳು ==
ಅನೇಕ ಪ್ರಕಾಶನ ಸಂಸ್ಥೆಗಳು, ವೃತ್ತ ಪತ್ರಿಕೆಗಳು, ಕಿರುತೆರೆ ವಾಹಿನಿಗಳು ಮುಂಬಯಿಯಿಂದ ಕಾರ್ಯನಿರ್ವಹಿಸುತ್ತಿವೆ.ಇಂಗ್ಲೀಷ್ ಪತ್ರಿಕೆಗಳಲ್ಲಿ ಮುಖ್ಯವಾದವುಗಳೆಂದರೆ,[[ಟೈಮ್ಸ್ ಆಫ್ ಇಂಡಿಯಾ]], [[ಇಂಡಿಯನ್ ಎಕ್ಸ್ ಪ್ರೆಸ್]], [[ಡಿ.ಎನ್.ಏ]], [[ಹಿಂದೂಸ್ತಾನ್ ಟೈಮ್ಸ್]] , [[ಮಿಡ್ ಡೇ]] ಇತ್ಯಾದಿ. [[ಮಹಾರಾಷ್ಟ್ರ ಟೈಮ್ಸ್]] , [[ಸಕಾಳ]], [[ಲೋಕಸತ್ತಾ]] , [[ಸಾಮನಾ]] ಮತ್ತು [[ನವಾಕಾಳ]] ಮುಖ್ಯ [[ಮರಾಠಿ]] ಪತ್ರಿಕೆಗಳು. ಇವಲ್ಲದೆ [[ಗುಜರಾತಿ]], [[ಕನ್ನಡ]], [[ತಮಿಳು]] ಮುಂತಾದ ಇತರೇ ಭಾಷೆಗಳ ಪತ್ರಿಕೆಗಳೂ ಮುಂಬಯಿಯಿಂದ ಹೊರಡುತ್ತವೆ. [[ಕರ್ನಾಟಕ ಮಲ್ಲ]],ಉದಯವಾಣಿ  ಕನ್ನಡ ಪತ್ರಿಕೆ ಮುಂಬಯಿಂದ ಪ್ರಕಟವಾಗುತ್ತಿವೆ. ಭಾರತದ ಅತಿ ಹಳೆಯ ದಿನಪತ್ರಿಕೆ ಎಂದು ಹೆಸರಾಗಿರುವ [[ಬಾಂಬೇ ಸಮಾಚಾರ್]] ಎಂಬ ಪತ್ರಿಕೆ [[ಗುಜರಾತಿ]] ಮತ್ತು ಇಂಗ್ಲೀಷಿನಲ್ಲಿ ಮುಂಬಯಿಯಿಂದ ೧೮೨೨ರಿಂದಲೂ ಪ್ರಕಟವಾಗುತ್ತಿದೆ.  

ಅನೇಕ ಕಿರುತೆರೆ ವಾಹಿನಿಗಳ ಕೇಂದ್ರ ಮತ್ತು ಪ್ರಾದೇಶಿಕ ಕಚೇರಿಗಳು ಮುಂಬಯಿಯಲ್ಲಿವೆ. ದೂರದರ್ಶನದ ಎರಡು ಕಿರುತೆರೆ ವಾಹಿನಿಗಳೊಂದಿಗೆ, ಮೂರು ಮುಖ್ಯ ಕೇಬಲ್ ಟಿವಿ ಜಾಲಗಳು ಮುಂಬಯಿಯ ಬಹುತೇಕ ಮನೆಗಳನ್ನು ತಲುಪಿವೆ.[[ಉಪಗ್ರಹ ಟಿವಿ]] (DTH) ಈಗಿನ್ನೂ (೨೦೦೬ರಲ್ಲಿ) ಪ್ರವೇಶಮಾಡುತ್ತಿದ್ದು ಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗುವ ಸಂಭವವಿದೆ. ೨೦೦೬ರ ಕೊನೆಯಿಂದ ನಗರದ ಅನೇಕ ಕಡೆಗಳಲ್ಲಿ [[Conditional Access System]] (CAS) ಮೂಲಕವೇ ಟಿವಿ ವಾಹಿನಿಗಳ ಪ್ರಸಾರವನ್ನು ಕಡ್ಡಾಯ ಮಾಡಲಾಗಿದೆ. ಕೇಬಲ್ ಟಿವಿ ಜಾಲಗಳ ಮೇಲೆ DTH ಮತ್ತು CASಗಳ ಪರಿಣಾಮ ಏನೆಂದು ಈಗಲೇ ಊಹಿಸುವುದು ಅಸಾಧ್ಯವಾದರೂ, ಈ ಉದ್ಯಮ ಇನ್ನು ಕೆಲವರ್ಷಗಳ(contracted; show full)ರೂಖ್ ಇಂಜಿನಿಯರ್]] , [[ವಿನೋದ್ ಕಾಂಬ್ಳಿ]],[[ವಿಜಯ್ ಮಾಂಜ್ರೇಕರ್]] ಇವರುಗಳು ಮುಂಬಯಿ ಖ್ಯಾತ ಕ್ರಿಕೆಟಿಗರಲ್ಲಿ ಕೆಲವೇ ಕೆಲವರು. [[ರಣಜೀ ಟ್ರೋಫಿ|ರಣಜೀ ಟ್ರೋಫಿಯನ್ನು]] ಕಳೆದ ಎಪ್ಪತ್ತೆರಡು ವರ್ಷಗಳಲ್ಲಿ ಮೂವತ್ತಾರು ಬಾರಿ (೨೦೦೫-೦೬ರವರೆಗೆ) ಗೆದ್ದಿರುವ ಮುಂಬಯಿಯ ದಾಖಲೆಯನ್ನು ಮುರಿಯುವುದು ಸುಲಭ ಸಾಧ್ಯವಲ್ಲ. ಎಪ್ಪತ್ತರ ದಶಕದಲ್ಲಿ ಭಾರತದ ಕ್ರಿಕೆಟ್ ತಂಡದಲ್ಲಿ ಏಳು-ಎಂಟು ಆಟಗಾರರು ಮುಂಬಯಿಯವರೇ ಆಗಿರುತ್ತಿದ್ದುದುಂಟು. ಆದರೆ , ಈಚೀಚೆಗೆ, ಭಾರತದ ಇತರ ಪ್ರದೇಶಗಳು, ಕರ್ನಾಟಕವೂ ಸೇರಿದಂತೆ , ಕ್ರಿಕೆಟಿನಲ್ಲಿ ಮುಂಬಯಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದ್ದು ಮುಂಬಯಿ ತನ್ನ ಮೊದಲಿನ ಅತಿವಿಶಿಷ್ಟ ಸ್ಥಾನವನ್ನು ಕಳೆದುಕೊಂಡಿದೆ.
  

[[ಫುಟ್ ಬಾಲ್]] ಸಹಾ ಮುಂಬಯಿಯ ಅತಿ ಜನಪ್ರಿಯ ಕ್ರೀಡೆ. ಮುಖ್ಯವಾಗಿ ಮಳೆಗಾಲದಲ್ಲಿ ಕಾಣಬರುವ ಈ ಕ್ರೀಡೆ, ಲೀಗ್ ಪಂದ್ಯಾವಳಿಗಳಿಂದ ಇನ್ನೂ ಜೀವಂತವಾಗಿದೆ. [[ಹಾಕಿ]] ಆಟವು ಮೊದಲಿನ ಘನತೆಯನ್ನು ಕಳೆದುಕೊಂಡಿದ್ದರೂ, ಮುಂಬಯಿಯ ಅನೇಕ ಹಾಕೀ ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದಾರೆ.  

ಮುಂಬಯಿಯ ಇತರ ಕ್ರೀಡೆಗಳೆಂದರೆ [[ಟೆನ್ನಿಸ್]], [[ಸ್ಕ್ವಾಶ್]], [[ಬಿಲಿಯರ್ಡ್ಸ್]], [[ಬ್ಯಾಡ್ಮಿಂಟನ್]], [[ಟೇಬಲ್ ಟೆನ್ನಿಸ್]] ಮತ್ತು [[ಗಾಲ್ಫ್]]. [[ರಗ್ಬೀ]] ಆಟ ಕಾಣಸಿಗುವ ಭಾರತದ ಕೆಲವೇ ಕೆಲವು ನಗರಗಳಲ್ಲಿ ಮುಂಬಯಿಯೂ ಒಂದು.[[ವಾಲಿಬಾಲ್]] ಮತ್ತು [[ಬ್ಯಾಸ್ಕೆಟ್ ಬಾಲ್]] ಕೂಡಾ ಶಾಲಾಕಾಲೇಜುಗಳಲ್ಲಿ ಜನಪ್ರಿಯವಾಗಿವೆ. ಕುದುರೆ ರೇಸಿನ ಪ್ರಿಯರಿಗಾಗಿ [[ಮಹಾಲಕ್ಷ್ಮಿ ರೇಸ್ ಕೋರ್ಸ್]] ಇದೆ. ಪ್ರತಿ ಫೆಬ್ರುವರಿಯಲ್ಲಿ ನಡೆಯುವ [[ಡರ್ಬಿ]] , ಭಾರತದ ಪ್ರತಿಷ್ಠಿತ ರೇಸುಗಳಲ್ಲಿ ಒಂದು.
== ಇದನ್ನೂ ನೋಡಿ ==
* [[ಪುರಾತನ ಮುಂಬೈ ನಗರದ ಏಳು ದ್ವೀಪಗಳ ಭೂಭಾಗಗಳು]]

== ಹೆಚ್ಚಿನ ಮಾಹಿತಿಗಾಗಿ ==
* [[ಹೊರನಾಡ ಕನ್ನಡ ಸಂಸ್ಥೆಗಳು]]


* [http://www.mcgm.gov.in/ ಬೃಹನ್ ಮುಂಬಯಿ ಮಹಾನಗರಪಾಲಿಕೆಯ ಅಧಿಕೃತ ತಾಣ ]
* [http://theory.tifr.res.in/bombay/ ಮುಂಬಯಿ ಪುಟಗಳು: ಮುಂಬಯಿ ನಗರದ ಸಂಪೂರ್ಣ ಮಾರ್ಗದರ್ಶಿ - (ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಿಂದ)]
* [http://mdmu.maharashtra.gov.in/pages/Mumbai/mumbaiplanShow.php ಮುಂಬಯಿ ನಗರದ ಅಧಿಕೃತ ವರದಿ ] 
* [http://www.bombay-india.net/ ಮುಂಬಯಿ ನಗರ ಮಾರ್ಗದರ್ಶಿ ]
* [http://thegreatindian.tripod.com/mumbai.htm ಮುಂಬಯಿ ನಗರದ ಪಕ್ಷಿನೋಟ ( ಅಪರೂಪದ ಫೋಟೋ)]

{{ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು}}

[[ವರ್ಗ:ಮಹಾರಾಷ್ಟ್ರದ ಪಟ್ಟಣಗಳು]]
[[ವರ್ಗ:ಭಾರತದ ಪಟ್ಟಣಗಳು]]
[[ವರ್ಗ:ಭೂಗೋಳ]]