Difference between revisions 984238 and 984249 on knwiki

{{ಅಳಿಸುವಿಕೆ|ವಿಶ್ವಕೋಶದ ಶೈಲಿಯಲ್ಲಿಲ್ಲ. ಉಲ್ಲೇಖಗಳೂ ಇಲ್ಲ}}

ಅನೇಕ ಕಾಹಿಲೆ -ರೋಗ -ದೈಹಿಕ ತೊಂದರೆಗೆ ಮನೆಯಲ್ಲೇ , ಆಹಾರ, ನೀರು ಮನೆಯಲ್ಲಿರುವ ಅಡಿಗೆಗೆ ಉಪಯೋಗಿಸುವ ಸೊಪ್ಪು, ತರಕಾರಿ, ವಸ್ತು, ಸಸ್ಯ, ನಾರು ಬೇರುಗಳಿಂದ ಔಷಧಿ ಮಾಡಿಕೊಂಡು ವಾಸಿಮಾಡಿಕೊಳ್ಳಬಹುದು. ಈ ಪದ್ದತಿ ಅನೂಚಾನವಾಗಿ ವಾಡಿಕೆಯಿಂದ ತಲೆಮಾರಿನಿಂಧ ತಲೆಮಾರಿಗೆ ,ಮನೆ ಮನೆಗಳಲ್ಲಿ ನಡೆದುಕೊಂಡು ಬಂದಿದೆ. ಬರವಣಿಗೆಗಳ ದಾಖಲೆ ಸಿಗುವುದು ಕಷ್ಟ. ಈಚೆಗೆ ಇದನ್ನು ಈ ಮನೆ ಮದ್ದಿನ ಬಗೆಯನ್ನು ದಾಖಲು ಮಾಡಲಾಗುತ್ತಿದೆ.
*ಹೆಚ್ಚಿನ ಕಾಹಿಲೆ, ದೈಹಿಕ ತೊಂದರೆ ಇದ್ದಾಗ ಇದನ್ನೇ ನೆಚ್ಚಿಕೊಳ್ಳದೇ ವೈದ್ಯರನ್ನು ಕಾಣುವುದು ಒಳಿತು
== ತರಕಾರಿ == 
(contracted; show full)
ಧೂರ್ವೆ ಸಣ್ಣಕಡ್ಡಿ ಎಲೆಯ ಹುಲ್ಲು.(ಗರಿಕೆ) ಗಣಪತಿ ದೇವರಿಗೆ ಪ್ರೀತಿಯಾದ ಹುಲ್ಲು' ಇದರ ಮೂರು ಎಸಳುಳ್ಳ ಕುಡಿಯನ್ನು ಗಣಪತಿ ದೇವರಿಗೆ ಪೂಜೆಯಲ್ಲಿ ಅರ್ಪಿಸುತ್ತಾರೆ.  ಇದರಲ್ಲಿ ವಿಶೇಷವಾದ ಔಷಧಿಯ ಗುಣವಿದೆ. ಇದರ ಬೇರಿನ (ತೊಳೆದು ಶುದ್ಧಮಾಡಿ) ಕಷಾಯ ಮಾಡಿ ದಿನನಿತ್ಯ ಮೂರರಿಂದ ಆರು ತಂಗಳು ಕುಡಿದರೆ ಮೂತ್ರ ಪಿಂಡದ ಸೋಂಕು ಖಾಹಿಲೆ (ನಫ್ರೈಟಿಸ್`) ಗುಣವಾಗುವುದು.  ೩-೪ ಜನರ ಮೇಲೆ ಪ್ರಯೋಗ ಮಾಡಿನೋಡಿ ಸಫಲತೆ ಕಂಡಿದೆ. ಡಾ. ಶಿವಕುಮಾರ ಸ್ವಾಮಿಯವರೂ ಇದನ್ನು ತಮ್ಮ ಆರೋಗ್ಯ ದರ್ಪಣ ಗ್ರಂಥದಲ್ಲಿ ಹೇಳದ್ದಾರೆ. ಆರಂಭದಲ್ಲೇ ಚಿಕಿತ್ಸೆ ಮಾಡಿದರೆ ಮೂತ್ರ ಪಿಂಡವನ್ನು ತೆಗೆದು-ಹಾಕುವ ಶಸ್ತ್ರ ಚಿಕಿತ್ಸೆ ಮಾಡಿಸುವ ಕಷ್ಟ ತಪ್ಪುತ್ತದೆ.
ಇದರ ಹುಲ್ಲನ್ನು ಬಣಗಿಸಿ  ಪುಡಿಮಾಡಿ ಪ್ರತಿನಿತ್ಯ ನೀರಿನಜೋತೆ ಸೇರಿಸಿ ಕುಡಿಯಬೇಕು.

==ಹೊಟ್ಟೆಯುಬ್ಬರ - ಉರಿತೇಗು :ಗ್ಯಾಸ್ಟೈಟಿಸ್==
*ಒಂದು ಚಮಚ ಜೀರಿಗೆಯನ್ನು ಒಂದು ಲೋಟ ನೀರಿನಲ್ಲಿ ೧೫ ನಿಮಿಷ ಕುದಿಸಿ ಇಟ್ಟುಕೊಳ್ಲಬೇಕು. ಊಟ ಅಥವಾ ತಿಂಡಿಯ ಮೂರುಗಂಟೆಯ ನಂತರ ಅರ್ಧ ಲೋಟದಷ್ಟು ಸ್ವಲ್ಪ ಬಿಸಿ ಮಾಡಿಕೊಂಡು ಒಂದು ಚಮಚ ಬೆಲ್ಲ ಒಂದು ಚಮಚ ನಿಂಬೆಹುಳಿ ಸೇರಿಸಿಕೊಂಡು  ನಿಧಾನವಾಗಿ ಕುಡಿಯಿರಿ (ಜೊಲ್ಲು ಸೇರಬೇಕು). <ref>ಪ್ರಜಾವಾಣಿ ೩೧-೧೦-೨೦೧೬ ಕೊನೆ ಪುಟ.</ref>
==ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸು==
*ಯಾವುದೇ ಕಾಯಿಲೆ ಇರಲಿ ಹೊಟ್ಟೆ ತುಂಬ ಊಟ ಮಾಡಿದ ನಂತರ ಔಷಧ ಸೇವಿಸಬೇಕು ಎನ್ನುವುದು ವಾಡಿಕೆ. ಆದರೆ ಕೆಲವು ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವುದೇ ಒಳಿತು.

(contracted; show full)ಹಾಗೆಯೇ ನೆಲ್ಲಿಕಾಯಿಯನ್ನು ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಕಫದ ಸಮಸ್ಯೆಯಿಂದ ದೂರವಿರಬಹುದು.

ಬಿಸಿ ಹಾಲಿಗೆ ಅರಿಶಿಣ ಮತ್ತು ಕಲ್ಲು ಸಕ್ಕರೆಯನ್ನು ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿದರೂ ಕಫ ಮತ್ತು ನೆಗಡಿ ಕಡಿಮೆಯಾಗುತ್ತದೆ.

ಜೇನು ಮತ್ತು ನಿಂಬೆರಸದೊಂದಿಗೆ ದಾಲ್ಚಿನಿಯನ್ನು ಸೇರಿಸಿ ಸೇವಿಸಿದರೂ ನೆಗಡಿ ಮತ್ತು ಕಫದ ಸಮಸ್ಯೆ ದೂರವಾಗುತ್ತದೆ.

ಕೆಮ್ಮು ಉಂಟಾಗುವ ಸಂದರ್ಭದಲ್ಲಿ ಕಲ್ಲು ಸಕ್ಕರೆ ಮತ್ತು ಲವಂಗವನ್ನು ಸೇವಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ.


== ಆಧಾರ ==
*೧. <ref>ಆರೋಗ್ಯ ದರ್ಪಣ -ಡಾ. ಪಂಡಿತ ಶಿವಕುಮಾರ ಸ್ವಾಮಿಗಳು
*೨. </ref>
<ref>ಪ್ರಜಾವಾಣಿ ೧೨-೭-೨೦೧೪- ಗೀತಾ ಬರ್ಲ

== ಆಧಾರ == 
*೧.</ref>
<ref>ವಿಜಯಕರ್ನಾಟಕ (ಮನೆ ಮದ್ದು ೨೭-೬-೨೦೧೪ ಡಾ.ಸುಜೇತಾ.)</ref>
==ಉಲ್ಲೇಖ==
[[ವರ್ಗ:ಔಷಧಿಗಳು]] [[ವರ್ಗ:ಆಯುರ್ವೇದ]][[ವರ್ಗ:ಚಿಕಿತ್ಸೆ]][[ವರ್ಗ:ಪ್ರಥಮ ಚಿಕಿತ್ಸೆ]]
[[ವರ್ಗ:ಸಸ್ಯಗಳು]]
[[ವರ್ಗ:ಔಷದೀಯ ಸಸ್ಯಗಳು]]
[[ವರ್ಗ:ವೈದ್ಯಕೀಯ]]
[[ವರ್ಗ:ಆರೋಗ್ಯ]]